ಕನ್ನಡ ವಾರ್ತೆಗಳು

ಕೋಟೇಶ್ವರ: ಕಾಳಾವರದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ | ಸಾವಿರಾರು ಭಕ್ತರಿಂದ ಕಾಳಿಂಗನಿಗೆ ಹರಕೆ ಸಮರ್ಪಣೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಪುರಾತನ ಸುಬ್ರಮಣ್ಯ ದೇವಸ್ಥಾನವಾದ ಕೋಟೆಶ್ವರ ಸಮೀಪದ ಕಾಳಾವರ ಶ್ರೀ ಸುಬ್ರಮಣ್ಯ (ಕಾಳಿಂಗ) ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ದಿನವಾದ ಗುರುವಾರ ಷಷ್ಠಿ ಮಹೋತ್ಸವ ಸಂಭ್ರಮದಿಂದ ಜರುಗಿತು. ದೇವಸ್ಥಾನದಲ್ಲಿ ಬೆಳಿಗ್ಗೆ 4.30 ರಿಂದಲೇ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಹರಕೆ ಸಮರ್ಪಿಸಿದರು.

Koteshwara_Kalavara_Shashti (9) Koteshwara_Kalavara_Shashti (10) Koteshwara_Kalavara_Shashti (5) Koteshwara_Kalavara_Shashti (6) Koteshwara_Kalavara_Shashti (7) Koteshwara_Kalavara_Shashti (3) Koteshwara_Kalavara_Shashti (2) Koteshwara_Kalavara_Shashti (4) Koteshwara_Kalavara_Shashti Koteshwara_Kalavara_Shashti (1) Koteshwara_Kalavara_Shashti (8) Koteshwara_Kalavara_Shashti (24) Koteshwara_Kalavara_Shashti (23) Koteshwara_Kalavara_Shashti (20) Koteshwara_Kalavara_Shashti (21) Koteshwara_Kalavara_Shashti (22) Koteshwara_Kalavara_Shashti (25) Koteshwara_Kalavara_Shashti (19) Koteshwara_Kalavara_Shashti (18) Koteshwara_Kalavara_Shashti (17) Koteshwara_Kalavara_Shashti (15) Koteshwara_Kalavara_Shashti (16) Koteshwara_Kalavara_Shashti (13) Koteshwara_Kalavara_Shashti (12) Koteshwara_Kalavara_Shashti (11) Koteshwara_Kalavara_Shashti (14)

ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಭಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯನಿಗೆ) ಶೃಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಶೃಂಗಾರ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕ್ರತಿಗಳನ್ನು ದೇವರಿಗೆ ಸಮರ್ಪಿಸಿ ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ತುಣುಕುಗಳನ್ನು ಮಾರುವ ಸಂಪ್ರದಾಯವಿದೆ. ಈ ಹರಕೆಗಳನ್ನು ಹಾಗೂ ಶೃಂಗಾರ ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು.

ಷಷ್ಠಿ ದಿನದಂದು ತಾಲೂಕಿನ ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಇದೆ.

ಈ ದಿನ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಆಗಮಿಸುವ ಭಕ್ತರು ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ದೇವಸ್ಥಾನದಿಂದ ಅನತಿ ದೂರದಿಂದಲೂ ಸರತಿ ಸಾಲಿನಲ್ಲಿ ಕಾದು ನಿಂತ ದೃಶ್ಯ ಸಾಮಾನ್ಯವಾಗಿತ್ತು.

ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಘೊಂಡರು. ಶುಕ್ರವಾರದಂದು ಹಾಲಿಟ್ಟು ಸೇವೆ, ಮಂಡಲ ಸೇವೆ ಹಾಗೂ ತುಲಾಭಾರ ಸೇವೆ ಜರುಗಲಿದೆ.

Write A Comment