ಕುಂದಾಪುರ: ತನ್ನ ಸಹೋದ್ಯೋಗಿಗಳೊಂದಿಗೆ ಪಿಕ್ನಿಕ್ಕಿಗೆಂದು ಬಂದ ಯುವಕನೋರ್ವ ಹೊಳೆಯಲ್ಲಿ ಈಜಲು ಹೋಗಿ ನೀರಿನ ಸೆಳೆತದಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರು ಸಮೀಪದ ಶಿರೂರು ಎಂಬಲ್ಲಿನ ಸಂಕದಗುಂಡಿಯಲ್ಲಿ ಶನಿವಾರ ಸಂಜೆ ನಡೆದಿದೆ.
ತುಮಕೂರು ಮೂಲದ ಆರ್.ಪಿ.ಎಂ. ಕಂಪೆನಿ ಉದ್ಯೋಗಿ ಗಿರೀಶ್ (27) ನೀರಿನಲ್ಲಿ ಮುಳುಗಿ ಮೃತಪಟ್ಟವರು.
ತುಮಕೂರು ಮೂಲದ ಆರ್.ಪಿ.ಎಂ. ಕಂಪೆನಿಯ ಹನ್ನೆರಡು ಮಂದಿ ಸಹೋದ್ಯೋಗಿಗಳು ಗೋವಾ ಪ್ರವಾಸ ಮುಗಿಸಿ ಮುರ್ಡೇಶ್ವರ ಮಾರ್ಗವಾಗಿ ಕೊಲ್ಲೂರಿಗೆ ತೆರಳುತ್ತಿರುವ ಸಂದರ್ಭ ಶಿರೂರಿನ ಸಂಕದಗುಂಡಿ ಸಮೀಪದಲ್ಲಿ ನದಿಯನ್ನು ನೋಡಿದ ಅವರು ಕೋಂಚ ವಿಶ್ರಮಿಸಲು ಕೆಳಗಿಳಿದು ಹೊಳೆಯತ್ತ ತೆರಳಿದ್ದಾರೆ. ಅಲ್ಲಿ ಎಲ್ಲರೂ ನೀರಿಗಿಳಿದು ಆಟವಾಡುತ್ತಿದ್ದ ಸಂದರ್ಭ ಅಚಾನಕ್ ಆಗಿ ಮುಂದಕ್ಕೆ ಸಾಗಿದ ಗಿರೀಶ್ ನೀರಿನ ಸೆಳೆತಕ್ಕೆ ಸಿಕ್ಕು ಮುಳುಗಿದ್ದಾನೆ. ತಮ್ಮೊಂದಿಗೆಯೇ ಇದ್ದ ಸಹೋದ್ಯೋಗಿ ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದು ಪ್ರತ್ಯಕ್ಷವಾಗಿ ನೋಡಿದರೂ ಕೂಡ ಅವರನ್ನು ರಕ್ಷಿಸಲು ಆತನ ಜೊತೆಗಿದ್ದವರು ಅಸಾಹಯಕರಾಗಿದ್ದರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.