ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ, ಫೆ.14: ಗಮ್ಮತ್ ಕಲಾವಿದೆರ್ ದುಬೈ ಇವರ ನಾಲ್ಕನೆ ವರ್ಷದ ಕಾಣಿಕೆಯಾಗಿ ಜುಮೇರಾ ಎಮಿರೆಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ನ ಎಮಿರೆಟ್ಸ್ ಥಿಯೇಟರ್ನಲ್ಲಿ ಶುಕ್ರವಾರ ಸಂಜೆ ಪ್ರದರ್ಶನಗೊಂಡ ತುಳು ಹಾಸ್ಯಮಯ-ಸಾಂಸಾರಿಕ ನಾಟಕ ‘ಎಡ್ಡೆಡುಪ್ಪುಗ’ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ದುಬೈಯ ಸ್ಥಳೀಯ ಕಲಾವಿದರೆ ನಟಿಸಿ, ನಿರ್ದೇಶಿಸಿರುವ ನಾಟಕ ನೋಡುಗರಿಗೆ ಮನೋರಂಜನೆಯ ಜೊತೆ ಒಳ್ಳೆಯ ಸಂದೇಶವನ್ನೂ ನೀಡಿದೆ.
ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸಮಾರಂಭದ ಉದ್ಘಾಟನೆಯನ್ನು ಗಣ್ಯರೆಲ್ಲ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ದುಬೈ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಪ್ರವೀಣ್ ಶೆಟ್ಟಿ, ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಹರೀಶ್ ಶೇರಿಗಾರ್, ಚಿಲಿವಿಲಿಯ ಸತೀಶ್ ವೆಂಕಟರಮಣ, ಅರಬ್ ಉಡುಪಿ ಹೊಟೇಲ್ಸ್ನ ಶೇಖರ್ ಶೆಟ್ಟಿ, ಉದ್ಯಮಿಗಳಾದ ಮೈಕಲ್ ಡಿಸೋಜ, ಹರೀಶ್ ಬಂಗೇರಾ, ಪ್ರೇಮ್ನಾಥ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಸರ್ವೋತಮ ಶೆಟ್ಟಿ, ಸುನಿಲ್ ಶೆಟ್ಟಿ, ಗುಣಶೀಲ ಶೆಟ್ಟಿ, ಗಿರಿಧರ್ ಶೆಟ್ಟಿ, ಮೊಹಮ್ಮದ್ ಸಾದಿಕ್, ಚೇತನ್, ಗಮ್ಮತ್ ಕಲಾವಿದೆರ್ ಸಂಘಟನೆಯ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ವಾಸು ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಸೀಮಾ ಶೆಟ್ಟಿ, ಸತೀಶ್ ಉಳ್ಳಾಲ್, ಸ್ಪಂದನ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಕೇಂದ್ರದ ಜನಾರ್ದನ, ನಾಟಕಕ್ಕೆ ಸಂಗೀತ ನೀಡಿದ ವಿಶ್ವನಾಥ ಶೆಟ್ಟಿ ನೆಲ್ಯಾಡಿ ಹಾಗೂ ನಿರೆಲ್ ತುಳು ಸಿನಿಮಾದ ನಟಿ ದೀಪ್ತಿ ಸಾಲ್ಯಾನ್ರವರಿಗೆ ಶಾಲು ಹೊದಿಸಿ, ಫಲ-ಪುಷ್ಪ-ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಪಂದನ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಕೇಂದ್ರಕ್ಕೆ ಗಮ್ಮತ್ ಕಲಾವಿದೆರ್ ಸಂಘಟನೆಯ ಪರವಾಗಿ 7,56,000 ರೂ.ಯ ಚೆಕ್ನ್ನು ಕೇಂದ್ರದ ಮುಖ್ಯಸ್ಥ ಜನಾರ್ದನರವರಿಗೆ ಹಸ್ತಾಂತರಿಸಲಾಯಿತು.ಇದೇ ವೇಳೆ ಉದ್ಯಮಿ ಮೈಕಲ್ ಡಿಸೋಜ 5 ಲಕ್ಷ ರೂ., ಚಿಲಿವಿಲಿಯ ಸತೀಶ್ ವೆಂಕಟರಮಣ 3 ಲಕ್ಷ ರೂ., ಹರೀಶ್ ಬಂಗೇರಾ 1 ಲಕ್ಷ ರೂ. ಸ್ಪಂದನ ಸಂಸ್ಥೆಗೆ ನೀಡಿ ಮಾನವೀಯತೆ ಮೆರೆದರು.
ಕಾರ್ಯಕ್ರಮದಲ್ಲಿ ಗಾಯಕರಾದ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಹರೀಶ್ ಶೇರಿಗಾರ್, ಅಕ್ಷತಾ ರಾವ್ ಹಾಗೂ ಪ್ರಸಾದ್ ಶೆಟ್ಟಿ ತಮ್ಮ ಸುಮಧರಕಂಠದ ಮೂಲಕ ಸಿನಿಮಾ ಹಾಡನ್ನು ಹಾಡಿ ಮನರಂಜಿಸಿದರು. ರಾಜೇಶ್ ಕುತ್ತಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ಕಥೆ-ನಿರೂಪಣೆಗೈದ ‘ಎಡ್ಡೆಡುಪ್ಪುಗ’ ನಾಟಕವನ್ನು ಗಮ್ಮತ್ ಕಲಾವಿದೆರ್ ದುಬೈಯ ವಿಶ್ವನಾಥ ಶೆಟ್ಟಿ ನಿರ್ದೇಶಿಸಿದ್ದು, ವಿಶ್ವನಾಥ ಶೆಟ್ಟಿ ನೆಲ್ಯಾಡಿ ಸಂಗೀತ ನೀಡಿದ್ದರು.
‘ಎಡ್ಡೆಡುಪ್ಪುಗ’ ನಾಟಕದಲ್ಲಿ ನಟಿಸಿದವೆರಲ್ಲರೂ ಸ್ಥಳೀಯ ಕಲಾವಿದರಾಗಿದ್ದು, ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ತುಂಬುವ ಮೂಲಕ ಅದ್ಭುತವಾಗಿ ನಟಿಸಿದ್ದಾರೆ. ನಾಟಕದ ಹಾಸ್ಯ ಸನ್ನಿವೇಶಗಳಂತೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಳುವಂತೆ ಮಾಡಿತು. ನಾಟಕದ ಬಳಿಕ ಕಲಾವಿದರಿಗೆ ಗಣ್ಯರು ಅಭಿನಂದನೆ ಸಲ್ಲಿಸಿದರು. ಉಡುಪಿ ನೇಜಾರಿನಲ್ಲಿರುವ ಸ್ಪಂದನ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಕೇಂದ್ರದ ಕುರಿತು ಕಿರುಪರಿಚಯವನ್ನು ಪ್ರದರ್ಶಿಸಲಾಯಿತು.
1 Comment
We hereby give thanks to all our sponsors,well wishers & drama lovers for their support towards success of this program for good noble cause.We look forword the same in near future.A special thanks to Kannadigaworld.com Team.
Best regards,
Vishwanath Shetty
President
Gammath Kalavider – U.A.E