ರಾಷ್ಟ್ರೀಯ

ಕಾನ್‌ಸ್ಟೆಬಲ್‌ ಹತ್ಯೆ: ಸಂಸದ ಸಂಜಯ್‌ ಸಿಂಗ್‌ ಪುತ್ರನ ಬಂಧನ

Pinterest LinkedIn Tumblr

anant-vikram-singhಅಮೇಠಿ: ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಡೆದಿದ್ದ ಕಾನ್‌ಸ್ಟೆಬಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್‌ ನಾಯಕ ಸಂಜಯ್‌ ಸಿಂಗ್‌ ಅವರ ಪುತ್ರ ಅನಂತ್ ವಿಕ್ರಮ್‌ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಭೂಪತಿ ಭವನದ ಮಾಲೀಕತ್ವಕ್ಕೆ ಸಂಬಂಧಿಸಿದ ಆಸ್ತಿ ವಿವಾದದಲ್ಲಿ ಕಾನ್‌ಸ್ಟೆಬಲ್‌ ವಿಜಯ್‌ ಕುಮಾರ್‌ ಮಿಶ್ರಾ ಅವರನ್ನು ಅದೇ ಸ್ಥಳದಲ್ಲಿ ಹತ್ಯೆಗೈಯಲಾಗಿತ್ತು ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಹೀರಾ ಲಾಲ್‌ ತಿಳಿಸಿದ್ದಾರೆ.

ಅಮೇಠಿಯ ರಾಜ ಕುಟುಂಬದ ಹಲವರು ಭೂಪತಿ ಭವನದ ಮಾಲಕತ್ವ ತಮ್ಮದೆಂದು ಹೇಳಿಕೊಳ್ಳುತ್ತಿದ್ದು ಇದೇ ಭವನದಲ್ಲಿ ಅನಂತ್‌ ಅವರನ್ನು ಬಂಧಿಸಲಾಗಿದೆ. ಅನಂತ್ ವಿಕ್ರಮ್ ಸಿಂಗ್ ವಿರುದ್ಧ ಸ್ಥಳೀಯ ನ್ಯಾಯಾಲಯವು ಜಾಮೀನು ರಹಿತ ವಾರಂಟನ್ನು ಹೊರಡಿಸಿದೆ ಎಂದು ಎಸ್‌ ಪಿ ಹೀರಾ ಲಾಲ್‌ ತಿಳಿಸಿದ್ದಾರೆ.

Write A Comment