ಭಯೋತ್ಪಾದಕರಿಂದ ಜೀವ ಬೆದರಿಕೆ ಇದ್ದರೂ ಸಹ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಕೆಂಪುಕೋಟೆ ಮೇಲೆ ಬುಲೆಟ್ ಪ್ರೂಫ್ ಗ್ಲಾಸ್ ಇಲ್ಲದೆ ಸಾಮಾನ್ಯ ಪ್ರಜೆಯಂತೆ ನಿಂತು ಭಾಷಣ ಮಾಡುವ ಮೂಲಕ ತಾವು ನಿಜವಾಗಿ ಜನರ ‘ಸೇವಕ’ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಯಾಕುಬ್ ಮೆನನ್ ನ ಗಲ್ಲು ಶಿಕ್ಷೆಗೆ ಪ್ರತಿಯಾಗಿ ಹಲವು ಉಗ್ರ ಸಂಘಟನೆಗಳು ಒಂದಾಗಿ ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವಾರು ಜೀವ ಬೆದರಿಕೆ ಬಂದಿದ್ದು ಬುಲೆಟ್ ಪ್ರೂಫ್ ಇಲ್ಲದೇ ಭಾಷಣ ಮಾಡುವುದು ಅವರ ಪ್ರಾಣಕ್ಕೆ ಅಪಾಯ ತರಬಹುದು. ಹೀಗಾಗಿ ಈ ಬಾರಿ ಬುಲೆಟ್ ಪ್ರೂಫ್ ಗ್ಲಾಸ್ ಬಳಸಲು ಭದ್ರತಾ ಅಧಿಕಾರಿಗಳು ಸೂಚನೆ ನೀಡಿದ್ದರು.
ಆದರೂ ಸಹ ಪ್ರಧಾನಿ ಮೋದಿಯ ಬುಲೆಟ್ ಪ್ರೂಫ್ ಗ್ಲಾಸ್ ನ್ನು ತೆಗೆಯುವಂತೆ ಸೂಚನೆ ನೀಡಿ ಯಾವುದೇ ಅಂಜಿಕೆಯಿಲ್ಲದೇ ಭಾಷಣ ಮಾಡುವ ಮೂಲಕ ತಾವೊಬ್ಬ ಸಾಮಾನ್ಯ ಪ್ರಜೆ ಎಂಬುದನ್ನು ಮತ್ತೊಮ್ಮೆ ಜನತೆಯೆದುರು ಸಾಬೀತು ಪಡಿಸಿದ್ದಾರೆ.
1 Comment
My dear Sweet pm