ಜಿಂದ್(ಹರಿಯಾಣಾ): ಹಿಂದೂ ಸಮುದಾಯದ ದಂಪತಿಗಳು ಒಂದು ಅಥವಾ ಎರಡು ಹೆರುವುದನ್ನು ಬಿಡಬೇಕು. ಕನಿಷ್ಠ ಐದು ಮಕ್ಕಳನ್ನು ಹೆರುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹರಿಯಾಣಾದ ಆರ್ಯ ಸಮಾಜದ ನಾಯಕ ಆಚಾರ್ಯ ವಿಜಯ್ ಪಲ್ ಹೇಳಿದ್ದಾರೆ.
ದಂಪತಿಗಳು ಐದು ಮಕ್ಕಳಲ್ಲಿ ಒಬ್ಬರನ್ನು ಶಿಕ್ಷಣಕ್ಕಾಗಿ ಗುರುಕುಲಕ್ಕಾಗಿ ಕಳುಹಿಸಿದಲ್ಲಿ ಆತನ ಜೀವ ದೇಶಕ್ಕಾಗಿ ಮುಡುಪಾಗಿಟ್ಟಂತಾಗುತ್ತದೆ ಎಂದು ಸಲಹೆ ನೀಡಿದರು.
ದೇಶದಲ್ಲಿ ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆಯಲ್ಲಿ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಮುಂಬರುವ 2030ರ ವೇಳೆಗೆ ಮುಸ್ಲಿಂ ಸಮುದಾಯ ದೇಶವನ್ನು ಆಳಲು ಆರಂಭಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪಸ್ ಕೊಡುತ್ತಿರುವ ವಿಷಯದ ಬಗ್ಗೆ ಮಾತನಾಡಿದ ವಿಜಯ್ ಪಲ್, ದೇಶದ ಪ್ರತಿಷ್ಠೆಗೆ ಮಸಿ ಬಳೆಯುವ ಸಂಚು ಇದಾಗಿದೆ ಎಂದು ಹೇಳಿದ್ದಾರೆ.