ಮಂಗಳೂರು,ಮೇ.28: ರಂಗ ಪಯಣ ತಂಡದಿಂದ ಡಾ.ಸಾರಾ ಅಬೂಬಕರ್ರವರ ಕಾದಂಬರಿ ಆಧಾರಿತ ಚಂದ್ರಗಿರಿಯ ತೀರದಲ್ಲಿ ಎಂಬ ನಾಟಕವು ನಯನ ಜೆ.ಸೂಡಾ ಅವರ ನಿರ್ದೇಶನದಲ್ಲಿ ನಗರದ ಪುರಭವನದಲ್ಲಿ ನಡೆಯಿತು.
ಈ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಡಾ.ಸಾರಾ ಅಬೂಬಕರನ್ನು ರಂಗ ತಂಡದ ಸದಸ್ಯರು ಗೌರವಿಸಿದರು.
ಮನಪಾ ಸದಸ್ಯ ದಯಾನಂದ ಶೆಟ್ಟಿ, ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ನರೇಂದ್ರನಾಯಕ್ ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್, ಸತ್ಯನರಾಯಣ ಮಲ್ಲಿಪಟ್ಟ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು.
Comments are closed.