ಕರಾವಳಿ

ಮಣಿಪಾಲದ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲನಿಂದ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ; ವಿದ್ಯಾರ್ಥಿಗಳ ಪ್ರೊಟೆಸ್ಟ್

Pinterest LinkedIn Tumblr

ಉಡುಪಿ: ಇವರು ಇಬ್ಬರೂ ವಿದ್ಯೆ ಕಲಿಸುವವ ಗುರುಗಳು. ಆದ್ರೆ ವಿದ್ಯೆ ಕಲಿಸುವ ಶಿಕ್ಷಕ, ವಿದ್ಯೆ ಕಲಿಸುವ ಶಿಕ್ಷಕಿಯ ಮೇಲೆ ವಕ್ರ ದೃಷ್ಟಿ ಹಾಕಿದ್ದಾನೆ. ಶಾಲೆಯ ಸಂದರ್ಬದಲ್ಲೇ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಬೇಕಾಗಿದ್ದ ಶಿಕ್ಷಕನ ಈ ಆಟಕ್ಕೆ ಈಗ ಕಾಲೇಜಿನಲ್ಲಿ ಪಾಠವೆ ನಿಂತಿದೆ. ಕಾಲೇಜು ವಿಭಾಗೀಯ ಮುಖ್ಯಸ್ಥ ಇದೀಗ ಕಾಲೇಜಿನಿಂದ ಆಮಾನತಾಗಿದ್ದಾನೆ.

Manipal_College_Problem (2)

Manipal_College_Problem (7)

Manipal_College_Problem (4)

Manipal_College_Problem (3)

Manipal_College_Problem (9)

Manipal_College_Problem (8)

Manipal_College_Problem (1)

Manipal_College_Problem (5)

Manipal_College_Problem (6)

ಮಣಿಪಾಲದಲದ ಪ್ರತಿಷ್ಟಿತ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಲೈಂಗಿಕ ಕಿರುಕುಳ ಘಟನೆ ನಡೆದಿದೆ. ಇಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರು ಉಪನ್ಯಾಸಕಿ. ವಿಭಾಗದ ಮುಖ್ಯಸ್ಥನಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು ಈ ಬಗ್ಗೆ ಉಪನ್ಯಾಸಕಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ಶನಿವಾರ ಸುಮಾರು 11 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದ್ದು ಈ ವಿಷಯವನ್ನು ತನ್ನ ಪತಿಗೆ ತಿಳಿಸಿದ ಬಳಿಕ ಕಾಲೇಜಿಗೆ ಪತಿ ಬಂದು ರಂಪಾಟವನ್ನು ನಡೆಸಿದ್ದಾರೆ. ಬಳಿಕ ಉಪನ್ಯಾಸಕಿ ಮಣಿಪಾಲ ಠಾಣೆಗೆ ದೂರು ದಾಖಲಿಸಿದ್ದಾರೆ. ಕಳೆದ 4 ವರ್ಷಗಳಿಂದ ಕಂಪ್ಯೂಟರ್ ಸಾಯನ್ಸ್ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಉಪನ್ಯಾಸಕಿಗೆ ಅದೇ ವಿಭಾಗದ ಮುಖ್ಯಸ್ಥನಾಗಿರುವ ಶ್ರೀಕಾಂತ್ ಪೈ ಕಿರುಕುಳ ನೀಡಿದ್ದಾನೆ. ಮೆಸೇಜ್ ಗಳ ಮೂಲಕ ಇಷ್ಟು ದಿನ ಕಿರುಕುಳ ನಿಡುತ್ತಿದ್ದ ಶ್ರೀಕಾಂತ್ ಶನಿವಾರ ಮಾತ್ರ ಕಿರುಕುಳ ನೀಡಿದ್ದಾರೆ ಎಂಬ ಹಿನ್ನಲೆಯಲ್ಲಿ ಉಪನ್ಯಾಸಕಿ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಇಂದು ಆಡಳಿತ ಮಂಡಳಿತ ತಕ್ಷಣವೇ ಶ್ರೀಕಾಂತ್ ಪೈ ಅವರನ್ನು ಅಮಾನತು ಮಾಡಿದೆ.

ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಇಂದು ವಿದ್ಯಾರ್ಥಿಗಳು ತರಗತಿ ಬಹಿಸ್ಕರಿಸಿ ಪ್ರತಿಭಟನೆ ನಡೆಸಿದರು. ಶಿಕ್ಷಕರೇ ಈ ರೀತಿ ನಡೆದುಕೊಳ್ಳುವುದಾದರೆ ವಿದ್ಯಾರ್ಥಿಗಳ ಸ್ಥಿತಿ ಏನು ಎಂದು ಕಳವಳ ವ್ಯಕ್ತಪಡಿಸಿರುವ ವಿದ್ಯಾರ್ಥಿ ಸಮೂಹ ಶಿಕ್ಷಕರಿಗೆ ಸೂಕ್ತವಾದ ಕಾನೂನು ರೀತಿಯ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಶಿಕ್ಷಕರದ್ದು ಇದು ಮೂರನೇ ಪ್ರಕರಣ ಈ ಹಿಂದೆಯೂ ಶಿಕ್ಷಕರು ಲೈಂಗಿಕ ಕಿರುಕುಳ ನಡೆಸಿದ್ದರು ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಆರೋಪಿಗೆ ಶಿಕ್ಷೆ ನೀಡದೇ ನಾವು ತರಗತಿಗೆ ಬರಲ್ಲ ಎಂದು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ಮಣಿಪಾಲದ ಪ್ರತಿಷ್ಟಿತ ಕಾಲೇಜಿನಲ್ಲೇ ಈ ರೀತಿಯ ಪ್ರಕರಣ ನಡೆದಿರುವುದು ವಿದ್ಯಾರ್ಥಿ ಸಮೂಹವನ್ನು ಬೆಚ್ಚಿ ಬೀಳಿಸಿದೆ. ಮಣಿಪಾಲದ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಬಳಿಕವಷ್ಟೇ ಸತ್ಯಾ ಸತ್ಯತೆ ತಿಳಿದುಬರಲಿದೆ.

Comments are closed.