ಬೆಂಗಳೂರು:ವಸತಿ ಸಚಿವರೂ ಆಗಿರುವ ಚಿತ್ರನಟ ಅಂಬರೀಶ್ ಅವರ ಚಿಕಿತ್ಸೆಗೆ ಸರಕಾರ ಮಾಡಿರುವ 1.4 ಕೋಟಿ ರೂ. ಖರ್ಚನ್ನು ವಸೂಲಿ ಮಾಡುವಂತೆ ಕೋರಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.
ಆ ಅರ್ಜಿ ಇನ್ನು ಕೆಲವೇ ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅಂಬರೀಶ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಅವರನ್ನು ಸಿಂಗಾಪುರಕ್ಕೆ ಕಳುಹಿಸಿ ಸರಕಾರ 1.4 ಕೋಟಿ ರೂ. ವ್ಯಯ ಮಾಡಿ ಚಿಕಿತ್ಸೆ ಕೊಡಿಸಿತ್ತು. ಸಾರ್ವಜನಿಕ ಹಣವನ್ನು ಸರಕಾರ ಆ ರೀತಿ ಖರ್ಚು ಮಾಡಿರುವುದು ಸರಿಯಲ್ಲ. ಆದ್ದರಿಂದ ಖರ್ಚಾಗಿರುವ ಹಣವನ್ನು ಅಂಬರೀಶ್ ಅವರಿಂದಲೇ ವಸೂಲು ಮಾಡಬೇಕು ಎಂದು ಅರ್ಜಿ ಸಲ್ಲಿಸಿರುವ ಬಿ.ವಿನೋದ್ ನ್ಯಾಯಾಲಯವನ್ನು ಕೋರಿದ್ದಾರೆ.
1 Comment
I dont like dis