ಧಾರವಾಡ: ದಲಿತರ ಕೈಗೆ ಬಂದೂಕು ಕೊಡಿ, ಸರ್ಕಾರದಿಂದ ದಲಿತರ ರಕ್ಷಣೆ ಸಾಧ್ಯವಿಲ್ಲ. ಬಂದೂಕು ನೀಡಿದರೆ ದಲಿತರು ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳುತ್ತಾರೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಧಾರವಾಡದಲ್ಲಿ ಸಾಹಿತಿ, ವಿಚಾರವಾದಿ ಎಂಎಂ ಕಲಬುರ್ಗಿ ಹತ್ಯೆ ಖಂಡಿಸಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ದಲಿತರ ಪರ ಅಂತ ಕಣ್ಣೀರು ಸುರಿಸುತ್ತಾರೆ. ಆದರೆ ಯಾರೂ ದಲಿತರು ರಕ್ತ ಸುರಿಸೋದನ್ನು ತಪ್ಪಿಸುತ್ತಿಲ್ಲ ಎಂದು ಹೇಳಿದರು.
-ಉದಯವಾಣಿ
Comments are closed.