ಕನ್ನಡ ವಾರ್ತೆಗಳು

ಕುಲಾಲ ಸಂಘ, ಸ್ಥಳೀಯ ಸಮಿತಿಯ ಸ್ನೇಹ ಸಮ್ಮಿಲನ

Pinterest LinkedIn Tumblr

mumbai_kulal_sanga_1

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್

ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಮೀರಾ – ವಿರಾರ್ ಸ್ಥಳೀಯ ಸಮಿತಿಯ 11ನೇ ವಾರ್ಷಿಕ ಸ್ನೇಹ ಸಮ್ಮಿಲನವು ನ. 23 ರಂದು ಭಾಯಂದರ್ ಪೂರ್ವದ ಜೆಸ್ಸಲ್ ಪಾರ್ಕ್ ಇಂದ್ರ ವರುಣ ಸಭಾಗೃಹದಲ್ಲಿ ಜರಗಿತು.ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರು ಉದ್ಘಾಟಿಸಿ ಕುಲಾಲ ಸಮಾಜಕ್ಕು ತನಗೂ ಇರುವ ಸಂಬಂಧವನ್ನು ತಿಳಿಸಿದರು.

mumbai_kulal_sanga_2 mumbai_kulal_sanga_3 mumbai_kulal_sanga_4 mumbai_kulal_sanga_5

ಗಿರೀಶ್ ಸಾಲ್ಯಾನ್ ಅವರು ಮಾತನಾಡುತ್ತಾ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತನವನ್ನು ನೋಂದಾಯಿಸುದರೊದಿಗೆ ಸಮಾಜದ ಯೋಜನೆಯಾದ ಕುಲಾಲ ಭವನ ನಿರ್ಮಾಣಕ್ಕೆ ಸಹಕರಿಸಬೇಕೆಂದರು.ಉಪಾಧ್ಯಕ್ಷ ದೇವದಾಸ ಕುಲಾಲ್, ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಅಮೂಲ್ಯ ಪತ್ರಿಕೆಯ ಉಪಸಂಪಾದಕ ಶಂಕರ್ ವೈ ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಇತರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ರಘು ಮೂಲ್ಯ, ಕೃಷ್ಣ ಮೂಲ್ಯ ಮೊದಲಾದವರು ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

mumbai_kulal_sanga_6 mumbai_kulal_sanga_7 mumbai_kulal_sanga_8 mumbai_kulal_sanga_9 mumbai_kulal_sanga_10 mumbai_kulal_sanga_11
ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಸುಂದರ್ ಮೂಲ್ಯ, ಕಾರ್ಯದರ್ಶಿ ಮೋಹನ್ ಬಂಜನ್, ಅರುಣ್ ಬಂಗೇರ, ಸುಂದರ್ ಕರ್ಮರನ್, ಯೋಗೇಶ್ ಬಂಗೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುರೇಖ ಬಂಗೇರ, ಕಾರ್ಯದರ್ಶಿ ರಸಿಕಾ ಮೂಲ್ಯ, ಪ್ರೇಮಾ ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರನ್ನು ಹಾಗೂ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.

ಸುಂದರ್ ಮೂಲ್ಯ ಸ್ವಾಗತಿಸಿದರು. ಮೋಹನ್ ಬಂಜನ್ ಅಭಾರ ಮನ್ನಿಸಿದರು.

Write A Comment