ಕನ್ನಡ ವಾರ್ತೆಗಳು

ಗೋಪಾಡಿ: ಹಾಡಹಗಲೇ ಮಹಿಳೆಯ ಭೀಕರ ಕೊಲೆ; ಅತ್ಯಾಚಾರ ನಡೆಸಿ ಕೊಲೆ ಶಂಕೆ; ಶಂಕಿತ ಆರೋಪಿಯ ಬಂಧನ

Pinterest LinkedIn Tumblr

Gopadi_Lady_Murder (30) Gopadi_Lady_Murder (2)

ಕುಂದಾಪುರ: ಹಾಡ ಹಗಲೇ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಸುರಿ ಮಹಿಳೆಯನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಗೋಪಾಡಿ ಬೀಚ್ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿಯೋ ಅಥವಾ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಗೋಪಾಡಿಯ ಬೀಚ್ ರಸ್ತೆ ಒಂಟಿ ಮನೆಯ ನಿವಾಸಿ ಆರೂವರೆ ತಿಂಗಳ ಗರ್ಭಿಣಿ ಇಂದಿರಾ ಮೊಗವೀರ(30) ಎಂಬಾಕೆಯೇ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯ ಹೆಸರನ್ನು ತನಿಖೆಯ ಕಾರಣದಿಂದ ಪೊಲೀಸರು ಬಹಿರಂಗಗೊಳಿಸಿಲ್ಲ.

Gopadi_Lady_Murder (1)

Gopadi_Lady_Murder (4) Gopadi_Lady_Murder (17) Gopadi_Lady_Murder (25) Gopadi_Lady_Murder (26) Gopadi_Lady_Murder (27) Gopadi_Lady_Murder (29) Gopadi_Lady_Murder (28) Gopadi_Lady_Murder (24) Gopadi_Lady_Murder (18) Gopadi_Lady_Murder (15) Gopadi_Lady_Murder (14) Gopadi_Lady_Murder (13) Gopadi_Lady_Murder (12) Gopadi_Lady_Murder (10) Gopadi_Lady_Murder (11) Gopadi_Lady_Murder (7) Gopadi_Lady_Murder (8) Gopadi_Lady_Murder (9) Gopadi_Lady_Murder (6) Gopadi_Lady_Murder (5) Gopadi_Lady_Murder (3) Gopadi_Lady_Murder (16) Gopadi_Lady_Murder (19) Gopadi_Lady_Murder (20) Gopadi_Lady_Murder (21) Gopadi_Lady_Murder (22) Gopadi_Lady_Murder (23)

ಘಟನೆಯ ವಿವರ: ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಡಿ ಎಂಬಲ್ಲಿ ಬೀಚ್ ರಸ್ತೆಯಲ್ಲಿ ಸಮುದ್ರ ಸಮೀಪವಿರುವ ಲಿಂಗಜ್ಜನ ಮನೆ ಎಂಬ ಒಂಟಿ ಮನೆಯಲ್ಲಿ ಕೊಲೆಗೀಡಾದ ಇಂದಿರಾ ಮೊಗವೀರ ವಾಸಿಸುತ್ತಿದ್ದರು. ಈಕೆಗೆ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಎರಡೂವರೆ ವರ್ಷ ಪ್ರಾಯದ ಗಂಡು ಮಗುವಿದೆ. ಈಕೆಯ ಗಂಡ ಮಲ್ಪೆಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದು, ವಾರ, ತಿಂಗಳಿಗೊಮ್ಮೆ ಬರುತ್ತಿದ್ದನೆನ್ನಲಾಗಿದೆ. ಇಂದಿರಾಳ ಅಕ್ಕ ಗಿರಿಜಾ ಹಾಗೂ ಆಕೆಯ ಮಗಳು ಪ್ರತಿಮಾ ಒಟ್ಟು ನಾಲ್ಕು ಜನ ಮನೆಯಲ್ಲಿ ವಾಸವಾಗಿದ್ದರು.

ಶನಿವಾರ ಸಂಜೆ ಸುಮಾರು ನಾಲ್ಕು ಗಂಟೆಯ ಸುಮಾರಿಗೆ ಗಿರಿಜಾ ಹಾಗೂ ಪ್ರತಿಮಾ ಸಮೀಪದ ಗೇರು ಹಾಡಿಯಲ್ಲಿ ಗೇರು ಬೀಜ ಹೆಕ್ಕಲೆಂದು ಹಾಡಿಗೆ ಹೋಗಿದ್ದರು. ಇಂದಿರಾಳ ಮಗ ಮನೆಯೊಳಗೆ ನಿದ್ದೆ ಮಾಡುತ್ತಿದ್ದ ಸಂದರ್ಭ ಮನೆಯ ಎದುರಿನ ಅಂಗಳಕ್ಕೆ ತಾಗಿಕೊಂಡಿರುವ ಕೊಟ್ಟಿಗೆಯಲ್ಲಿ ಕಟ್ಟಿಗೆ ಹೊಂದಿಸಲು ಇಂದಿರಾ ಹೋಗಿದ್ದರೆನ್ನಲಾಗಿದೆ. ಇದೇ ಸಂದರ್ಭ ಅಪರಿಚಿತ ಕೊಟ್ಟಿಗೆಗೆ ನುಗ್ಗಿ ಆಕೆಯನ್ನು ಅತ್ಯಾಚಾರಗೈದು ನಂತರ ಆಕೆಯ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಲಾಗಿದೆ. ಇದೇ ಸಂದರ್ಭ ಮನೆ ಸಮೀಪ ಇನ್ನೊಂದು ಮನೆಯ ಮಹಿಳೆಯೊಬ್ಬರು ಬಂದುದ್ದನ್ನು ಗಮನಿಸಿದ ಆರೋಪಿಗಳು ಅಲ್ಲಿಂದ ಪಲಾಯನಗೈದಿದ್ದು, ಆರೋಪಿ ಎನ್ನಲಾದ ವ್ಯಕ್ತಿಯನ್ನು ಆಕೆ ಗುರುತಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಿ ನಂತರ ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಹಾಜರಿದ್ದರು. ಉಡುಪಿಯ ಅಪರಾಧ ಪತ್ತೆದಳ ಇಲಾಖೆಯಿಂದ ಶ್ವಾನ ದಳ ಕರೆಯಿಸಲಾಗಿದ್ದು ಪರಿಶೀಲನೆ ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ.

ಆರೋಪಿ ಓಡಿರುವುದನ್ನು ಗುರುತಿಸಿದ್ದ ಮಹಿಳೆಯ ಹೇಳಿಕೆಯಂತೆ ಬೀಜಾಡಿ ನಿವಾಸಿಯೊಬ್ಬನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು, ಆತನ ಕೈಕಾಲಿನಲ್ಲಿ ರಕ್ತದ ಕಲೆಗಳಿದ್ದವೆನ್ನಲಾಗಿದೆ. ಆದರೆ ಬಂಧಿತ ಆರೋಪಿಯ ಹೆಸರನ್ನು ತನಿಖೆಯ ದೃಷ್ಟಿಯಿಂದ ಬಹಿರಂಗಪಡಿಸಿಲ್ಲ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲಭೂತ ಸೌಕರ್ಯ ಇಲ್ಲ: ಬೀಜಾಡಿ ಪ್ರವಾಸಿ ತಾಣವಾಗಿದ್ದು, ಕಡಲ ತೀರದಲ್ಲಿಯೇ ಇರುವ ಈ ಮನೆಯಲ್ಲಿ ಮೂಲ ಭೂತ ಸೌಕರ್ಯವಾದ ವಿದ್ಯುತ್ ಸಂಪರ್ಕವೇ ಇಲ್ಲ. ಇದರಿಂದಾಗಿ ಪೊಲೀಸರು ಎಫ್‌ಐ‌ಆರ್ ದಾಖಲಿಸಲು ಚಿಮಿಣಿ ದೀಪವನ್ನೇ ಅವಲಂಭಿಸಬೇಕಾಯಿತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ. ಶ್ರೀಯಾನ್, ಪ್ರತೀ ಮನೆಗೂ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರ ಹಾಗೂ ಇಲಾಖೆಯ ಕರ್ತವ್ಯ. ಆದರೆ ಸಿ‌ಆರ್‌ಝೆಡ್ ನೆಪವಾಗಿಟ್ಟುಕೊಂಡು ಮೂಲಭೂತ ಸೌಕರ್ಯ ವಂಚಿಸುವುದು ಎಷ್ಟು ಸರಿ ಎಂದು ಇಲಾಖೆ ಹಾಗೂ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.

ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯಾಚಾರ, ಕೊಲೆ ಪ್ರಕರಣಗಳ ಜೊತೆಗೆ ಹಲವು ನಿಗೂಢ ಸಾವು ಪ್ರಕರಣಗಳು ಸಂಭವಿಸುತ್ತಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ. ಅಲ್ಲದೇ ಇಂದಿರಾ ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಇಲ್ಲದಿದ್ದರೆ ಡಿವೈ‌ಎಫ್‌ಐ ಸಂಘಟನೆ ಉಗ್ರ ಹೋರಾಟ ನಡೆಸುತ್ತದೆ ಎಂದು ಡಿವೈ‌ಎಫ್‌ಐ ಸಂಘಟನೆಯ ಮುಖಂಡ ಸತೀಶ್ ಕುಮಾರ್ ತೆಕ್ಕಟ್ಟೆ ಆಗ್ರಹಿಸಿದ್ದಾರೆ.

Write A Comment