ಕನ್ನಡ ವಾರ್ತೆಗಳು

ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ 20ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ.

Pinterest LinkedIn Tumblr

sukumar_gauda_photo

ಮಂಗಳೂರು,ಆಗಸ್ಟ್.10 : ಹಿರಿಯ ಶಿಕ್ಷಣ ತಜ್ಞರಾದ ಪುತ್ತೂರಿನ ಡಾ| ಎನ್. ಸುಕುಮಾರ ಗೌಡರವರು ಅಗೋಸ್ತು 28, 29, 30ರಂದು ಕಟೀಲಿನಲ್ಲಿ ಜರಗಲಿರುವ 20ನೆಯ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಬನಾರಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಇಡಿ ಪದವಿಯನ್ನು ಪಡೆದಿರುವ ಶ್ರೀಯುತರು ಕೆನಡಾದ ಕ್ವೀನ್ಸ್ ವಿವಿಯಿಂದ ಎಂ.ಇಡಿ , ಟೊರೆಂಟೋ ವಿವಿಯಿಂದ ಪಿ.ಹೆಚ್.ಡಿ. ಪಡೆದಿದ್ದಾರೆ.ಅನೇಕ ಉಪಯುಕ್ತ ಹಾಗೂ ಮೌಲ್ಯಾಧಾರಿತ ಪುಸ್ತಕಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬರೆದು ಪ್ರಕಟಿಸಿದ್ದಾರೆ ‘ಮಗು ಮನೆಯಿಂದ ಶಾಲೆಗೆ’, ‘ಕಲಿಕೆ’, ‘ಗುಣಶೋಧ’ ಎನ್ನುವ ಶಿಕ್ಷಣ ಚಿಂತನಗಳುಳ್ಳ ಪುಸ್ತಕಗಳಲ್ಲದೆ, ಇಂಗ್ಲೀಷ್ ಭಾಷೆಯಲ್ಲಿ Problems and Prospects of our Education (ಡಾ. ಶಿವರಾಮ ಕಾರಂತರಿಂದ ‘ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ’ ಎನ್ನುವ ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದವಾಗಿದೆ.) ‘‘Language for Doctors, Basic English hand book for beginners, Basic English a hand book for Students Learinig and the hearner ಮುಂತಾದ ಪುಸ್ತಕಗಳನ್ನು ಬರೆದಿರುವರು.

ಇವರ ಕುರಿತಾಗಿ ಕಾಂತಾವರ ಕನ್ನಡ ಸಂಘವು 2014 ರಲ್ಲಿ ಶಿಕ್ಷಣ ಸಿದ್ದಾಂತಿ ಡಾ. ಎನ್. ಸುಕುಮಾರ ಗೌಡ ಎನ್ನುವ ವ್ಯಕ್ತಿ ಚಿತ್ರಣ ಹೊತ್ತಗೆಯನ್ನು ಪ್ರಕಟಿಸಿರುತ್ತದೆ. ಕೆನಡ ಕಿಬೆಕ್ ಪ್ರಾಂತ್ಯದ ರೀಡಿಂಗ್ ಎಸೋಸಿಯೇಶನ್ ದತ್ತಿನಿಧಿ ಪ್ರಶಸ್ತಿ, ಕೆನಡಾ ಕೌನ್ಸಿಲ್‌ನ ಫೆಲೋಶಿಪ್ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹಿತ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

1975 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಕೆನಡಾ ದೇಶಕ್ಕೆ ತೆರಳಿದ ಅವರು ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದ ವರೆಗೆ 12  ವರ್ಷಗಳ ಅವಧಿಯ ಅಧ್ಯಾಪನ, ಅಧ್ಯಯನವನ್ನು ನಡೆಸಿರುತ್ತಾರೆ.

Write A Comment