ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಮಾಟುಂಗಾ (ಪೂ.) ಮೈಸೂರು ಅಸೋಸಿಯೇಶನ್ ನ ಫೆ. 27ರಂದು ಅಸೋಸಿಯೇಶನ್ ಸ್ಥಾಪನೆಗೊಂಡು 90 ವರ್ಷಗಳನ್ನು ಪೂರ್ಣ ಗೊಳಿಸಿ, 91ನೇ ಸಾಲಿಗೆ ಪಾದಾರ್ಪಣೆ ಮಾಡಿದ.
ಅಸೋಸಿಯೇಶನಿನ ಪದಾಧಿಕಾರಿ ಡಾ| ಮಂಜುನಾಥ್ ಅವರು, ಅಸೋಸಿಯೇಶನಿನ ಸ್ಥಾಪನೆ, ಸಾಧನೆ ಗಳನ್ನು ಚಿತ್ರ ದಾಖಲೆಯೊಡನೆ ವಿವರಿಸಿದರು. ಇದೇ ಸಂದರ್ಭದಲ್ಲಿ ಅಸೋಸಿಯೇಶನಿನ ಹಿರಿಯ ಸದಸ್ಯರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಸೋಸಿಯೇಶನಿನ ವಜ್ರ ಮಹೋತ್ಸವ ಕಾಲದಲ್ಲಿ ಅಧ್ಯಕ್ಷರಾಗಿದ್ದ 92ರ ಹರೆಯದ ಚಂಪಕ್ನಾಥ್ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಚಂಪಕ್ನಾಥ್, ಬೆಂಗಳೂರಿನಲ್ಲಿ ನೆಲೆಸಿರುವ ನಾನು ಕಾರ್ಯ ನಿಮಿತ್ತ ಮುಂಬಯಿಗೆ ಆಗಮಿಸಿದ್ದು, ಇದೊಂದು ಯೋಗಾನು ಯೋಗ ಎಂದೇ ಹೇಳಬಹುದು. ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತಿದೆ ಎಂದರು.
ಅಸೋಸಿಯೇಶನಿನ ಪ್ರಾರಂಭದ ದಿನಗಳಿಂದಲೂ ಸಂಸ್ಥೆಯ ಅಭಿವೃದ್ಧಿª ಗಾಗಿ ಹಗಲಿರುಳು ದುಡಿಯುತ್ತಿರುವ ನ್ಯಾಯವಾದಿ ಬಿ. ನಾರಾಯಣ ಸ್ವಾಮಿ ಹಾಗೂ ಶಾರದಮ್ಮ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರಿ ಲೀಲಾ ಜೋಯಿಸ್ ಅವರನ್ನು ಸಮ್ಮಾನಿಸಲಾಯಿತು.
ಅಸೋಸಿಯೇಶನಿನ ಕ್ರೀಡಾ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿದ್ದು ಕೊಂಡು ಅಸೋಸಿಯೇಶನ್ ಮುಂಬಯಿಯ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ತರುವಲ್ಲಿ ವಿಶೇಷ ಕೊಡುಗೆ ನೀಡಿದ ಎ. ಎನ್. ರಾಮಪ್ರಸಾದ್ ಮತ್ತು ಎಚ್. ಕೆ. ಸೀತಾರಾಂ ಹಾಗೂ ಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ, ದಾನಿಗಳಾದ ಸತ್ಯವತಿ ಪ್ರಸನ್ನ, ಸುಶೀಲಮ್ಮಾ ರಾಮಣ್ಣ, ಅನಸೂಯಾ ಅಯ್ಯಂಗಾರ್, ಡಾ| ಎಚ್. ಎಸ್. ಶ್ರೀನಿವಾಸ್, ಸಿ. ಆರ್. ವೆಂಕಟೇಶ್, ಕೆ. ಎನ್. ಕೀರ್ತಿ, ಬಿ. ಎಂ. ಬೆಲೇರಿ, ಎಚ್. ಆರ್. ವಸಂತ್, ಡಾ| ಬಿ. ಆರ್. ಮಂಜುನಾಥ್ ಮತ್ತು ಕೆ. ಮಂಜುನಾಥಯ್ಯ ಅವರ ಕೊಡುಗೆಯನ್ನು ಸ್ಮರಿಸಿ ಗೌರವಿಸಲಾಯಿತು. ಅಸೋಸಿಯೇಶನಿನ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂಗೀತ ಕಲಾವಿದ ಶ್ಯಾಮಲಾ ರಾಧೇಶ್ ಅವರು ಭಾವಗೀತೆಗಳನ್ನು ಹಾಡಿದರು. ನಾರಾಯಣ ನವಿಲೇಕರ್ ಅವರು ಖ್ಯಾತ ಕವಿ ನಿಸಾರ್ ಅಹಮದ್ ಅವರ ಕವನ ವಾಚಿಸಿದರು. ಪುಟಾಣಿಗಳಾದ ಆರೋಹಿ ಮತ್ತು ಅನಿಕಾ ಅವರಿಂದ ಸಿನೆಮಾ ಗೀತೆಗಳ ಗಾಯನ ಜರಗಿತು.