ಜೈಪುರ: ನೀರು ಕುಡಿಯಲು ಬಂದ ಚಿರತೆಯ ತಲೆ ಬಿಂದಿಗೆಯ ಒಳಗಡೆ ಸಿಲುಕಿ 4 ಗಂಟೆಗಳಿಗೂ ಅಧಿಕ ಕಾಲ ಪರದಾಡಿದ ಘಟನೆ ರಾಜಸ್ಥಾನದ ಹಳ್ಳಿಯೊಂದರಲ್ಲಿ ನಡೆದಿದೆ.
ನೀರು ಕುಡಿಯಲು ಬಿಂದಿಗೆ ಒಳಗೆ ತಲೆ ಹಾಕಿದ ಚಿರತೆಯ ತಲೆ ಬಿಂದಿಗೆಯೊಳಗೆ ಸಿಲುಕಿಕೊಂಡಿತ್ತು. ತಲೆ ಸಿಲುಕಿಕೊಂಡ ಬಳಿಕ ಚಿರತೆ ದಿಕ್ಕು ತೋಚದೆ ಪರದಾಡಿತು. ಚಿರತೆಯ ಪರದಾಟವನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಚುಚ್ಚು ಮದ್ದು ನೀಡಿ ಚಿರತೆಯ ತಲೆಯನ್ನು ಹೊರ ತೆಗೆದು ರಕ್ಷಿಸಿದ್ದಾರೆ.