ರಾಷ್ಟ್ರೀಯ

ಪ್ರತಿಭಟನೆ ಕೈಬಿಡಲು ನಿವೃತ್ತ ಸೇನಾನಿಗಳಿಗೆ ಪ್ರಧಾನಿ ಕಾರ್ಯಾಲಯ ಮನವಿ

Pinterest LinkedIn Tumblr

OROP-newsನವದೆಹಲಿ: ಒನ್ ರ್ಯಾಂಕ್  ಒನ್ ಪೆನ್ಷನ್( ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ನಿವೃತ್ತ ಸೇನಾನಿಗಳು ತೀವ್ರಗೊಳಿಸಿದ್ದು ಪ್ರಧಾನಿ ಕಾರ್ಯಾಲಯ ಮಧ್ಯಪ್ರವೆಶಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಪ್ರತಿಭಟನಾ ನಿರತ ನಿವೃತ್ತ ಸೇನಾನಿಗಳನ್ನು ಮಾತುಕತೆಗೆ ಆಹ್ವಾನಿಸಿದ್ದು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಸಮಾನ ಹುದ್ದೆ ಸಮಾನ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮೂವರು ನಿವೃತ್ತ ಸೇನಾ ಮುಖ್ಯಸ್ಥರು ಆಮರಣಾಂತ ಉಪವಾಸ ಪ್ರಾರಂಭಿಸಿರುವುದರಿಂದ ಪ್ರಧಾನಿ ಕಾರ್ಯಾಲಯ ಮಧ್ಯಪ್ರವೆಶಿಸಿದೆ.

ಒಆರ್ ಒಪಿಯನ್ನು ತಕ್ಷಣವೇ ಜಾರಿಗೊಳಿಸಲು ಒತ್ತಾಯಿಸಿ ಈಗಾಗಲೇ ಮಾಜಿ ಸೇನಾ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.  ಯೋಜನೆ ಜಾರಿಗೆ ಬದ್ಧವಾಗಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರ ಕಾಲಮಿತಿಯನ್ನು ನಿಗದಿಪಡಿಸಿಲ್ಲ.   ಒಆರ್ ಒಪಿಯಿಂದ 25 ಲಕ್ಷ ನಿವೃತ್ತ ಸೇನಾನಿಗಳಿಗೆ ಉಪಯೋಗವಾಗಲಿದೆ.

Write A Comment