ಕನ್ನಡ ವಾರ್ತೆಗಳು

ಮೂಡಬಿದ್ರೆ: ಸೆರೆ ಸಿಕ್ಕ ಸರಗಳ್ಳನಿಗೆ “ಸಾರ್ವಜನಿಕ ಸನ್ಮಾನ”

Pinterest LinkedIn Tumblr

mudabdre_chain_sncher

ಮೂಡುಬಿದ್ರೆ , ಅ.14: ಇಲ್ಲಿನ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕರೇ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಸರಗಳ್ಳನೋರ್ವನನ್ನು ಪತ್ತೆಹಚ್ಚಲಾಗಿದ್ದು, `ಸಾರ್ವಜನಿಕ ಸನ್ಮಾನ’ದ ಬಳಿಕ ಆತನನ್ನು ಪೊಲೀಸರಿಗೊಪ್ಪಿಸಲಾಗಿದೆ.

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಕಾರ್ಕಳಕ್ಕೆ ಹೋಗುವ ಬಸ್‍ಗಳು ನಿಲ್ಲುವ ಸ್ಥಳದಲ್ಲಿ ಮಹಿಳೆಯೊಬ್ಬರು ಮಗುವಿನ ಜೊತೆ ಬಸ್‍ಗೆ ಕಾಯುತ್ತಾ ನಿಂತಿದ್ದರು. ಈ ಸಂದರ್ಭ ಸರಗಳ್ಳನೋರ್ವ ಮಗುವಿನ ಸರ ಎಳೆದು, ಓಡಲು ಯತ್ನಿಸಿದ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಆತನನ್ನು ಹಿಡಿದು ವಿಚಾರಿಸಿ ಪೊಲೀಸರಿಗೊಪ್ಪಿಸಿದ್ದಾರೆ.

Write A Comment