ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೋಮವಾರ ಭೂಕಂಪನವಾದ ವರದಿಗಳಾಗಿವೆ. ಇದು ಅಲ್ಲಿನ ನಿವಾಸಿಗಳಲ್ಲಿ ಆತಂಕ ಮತ್ತು ಭಯ ಸೃಷ್ಟಿಸಿದೆ.
ಭೂಕಂಪನ ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲೂ ಸಂಭವಿಸಿದ್ದು, ದೆಹಲಿ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂಬೈನ ಕೆಲವು ಭಾಗಗಳಲ್ಲಿ ಕೂಡ ಭೂಮಿ ಕಂಪಿಸಿದ ವರದಿಗಳಾಗಿವೆ.
ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ ೭.೭ ಇದೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಲ್ಲೂ ಭೂಮಿ ಕಂಪಿಸಿದ ವರದಿಗಳು ಲಭ್ಯವಾಗಿದ್ದು, ಎಲ್ಲೂ ಸಾವು ನೋವಿನ ವರದಿಯಾಗಿಲ್ಲ. ಇದೆ ಭೂಕಂಪನದ ಕೇಂದ್ರ ಬಿಂದು ಎಂದು ತಿಳಿಯಲಾಗಿದೆ.