ಕನ್ನಡ ವಾರ್ತೆಗಳು

ಗಂಗೊಳ್ಳಿ: ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ: ಹಾಡಿಯಲ್ಲಿ ಸಿಕ್ಕ ಕೊಳೆತ ಶವ

Pinterest LinkedIn Tumblr

ಕುಂದಾಪುರ: ಅ.9 ರಂದು ಉತ್ತರ ಕನ್ನಡ ಜಿಲ್ಲೆಯ ಗುಣವಂತೆ ಗ್ರಾಮದಿಂದ ತನ್ನ ಹೀರೊ ಶೈನ್ ಬೈಕ್ ಸಹಿತ ನಾಪತ್ತೆಯಾದ ವಿಶ್ವನಾಥ ಗೌಡ (36) ಎನ್ನುವವರು ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಹೊಸಾಡು ಎಂಬಲ್ಲಿನ ಹಾಡಿಯೊಂದರಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಸ್ಥಳೀಯರು ಕಟ್ಟಿಗೆ ಸಂಗ್ರಹಕ್ಕಾಗಿ ಹಾಡಿಗೆ ತೆರಳಿದ್ದ ವೇಳೆ ಈ ಕೊಳೆತ ಶವ ಪತ್ತೆಯಾಗಿದೆ.

Uttarakannada_Vishwanatha_Suside (2)

ವಿಶ್ವನಾಥ ಗೌಡ ಅವರು ಅ.9 ರಂದು ತನ್ನ ಬೈಕಿನಲ್ಲಿ ಮನೆಯಿಂದ ತೆರಳಿದವರು ವಾಪಾಸು ಮನೆಗೆ ಬಂದಿರಲಿಲ್ಲ. ಮನೆಯವರು ಹಾಗೂ ಸ್ನೇಹಿತರು ಸತತ ಹುಡುಕಾಟ ನಡೆಸಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು ಎರಡು ವಾರಗಳ ಹಿಂದೆ (ಅ.13) ವಿಶ್ವನಾಥ ಅವರ ಬೈಕ್ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟ್ವಾಡಿ ಎಂಬಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬೈಕ್ ಪತ್ತೆಯಾದ ಒಂದೆರಡು ದಿನಗಳ ಬಳಿಕವೂ ಈ ವ್ಯಕ್ತಿ ಸ್ಥಳಿಯ ಆಸುಪಾಸಿನಲ್ಲಿ ಓಡಾಡಿದವರನ್ನು ಗಮನಿಸಿದವರಿದ್ದಾರೆ. ಆದರೇ ಆನಂತರದಲ್ಲಿ ವ್ಯಕ್ತಿ ಪತ್ತೆಯಿರಲಿಲ್ಲ.

Jpeg

Jpeg

Jpeg

Jpeg

Jpeg

Jpeg

Jpeg

ಸೋಮವಾರ ಸಂಜೆ ಸುಮಾರಿಗೆ ಸ್ಥಳೀಯರು ಕಟ್ಟಿಗೆ ಸಂಗ್ರಹಣೆಗಾಗಿ ಹೊಸಾಡು ಎಂಬಲಿನ ನಾವುಡರ ಹಾಡಿಗೆ ತೆರಳಿದ್ದ ವೇಳೆ ಅಲ್ಲಿನ ಬೊಬ್ಬರ್ಯ ದೇವಸ್ಥಾನದ ಸಮೀಪದ ಮರವೊಂದರ ಕೆಳಗೆ ವ್ಯಕ್ತಿಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುವ ವೇಳೆ ಇದು ಕಾಣೆಯಾದ ವಿಶ್ವನಾಥ ಶವವೆಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು ಮರಕ್ಕೆ ನೇಣು ಬಿಗಿದು ಆತ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಅಂದಾಜಿಸಲಾಗಿದೆ. ಆತ್ಮಹತ್ಯೆಗೆ ಮಾಡಿಕೊಂಡು ಹಲವು ದಿನಗಳಾದ ಕಾರಣ ಹಗ್ಗ ತುಂಡರಿಸಿ ಶವ ಕೆಳಗೆ ಬಿದ್ದಿದೆ ಎನ್ನಲಾಗಿದೆ. ಅಲ್ಲದೇ ಸ್ಥಳದಲ್ಲಿ ಈತ ಉಪಯೋಗಿಸುತ್ತಿದ್ದರೆನ್ನಲಾದ ಚೀಲವೊಂದು ಪತ್ತೆಯಾಗಿದೆ. ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವಿಶ್ವನಾಥ್ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಅಂದಾಜಿಸಲಾಗಿದೆ.

ಮ್ರತದೇಹವು ಸಂಪೂರ್ಣ ಕೊಳೆತ ಕಾರಣ ಅದನ್ನು ಸ್ಥಳದಲ್ಲಿ ಮರಣೋತ್ತರ ಶವ ಪರೀಕ್ಷೆ ಮಾಡಬೇಕಾಗಿದ್ದ ಅನಿವಾರ್ಯತೆಯಿದ್ದರೂ ಕೂಡ ಇದಕ್ಕೆ ಸ್ಪಂದಿಸದ ಸ್ಥಳೀಯ ಆರೋಗ್ಯ ಉಪಕೇಂದ್ರದ ವೈದ್ಯಾಧಿಕಾರಿ ಸ್ಥಳದಲ್ಲಿ ಶವಪರೀಕ್ಷೆ ನಡೆಸಲು ಹಿಂದೇಟು ಹಾಕಿದ್ದು ಸ್ಥಳೀಯರು ಈ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು. ಸೋಮವಾರ ರಾತ್ರಿಯಿಡೀ ಪೊಲೀಸರು ಹಾಗೂ ಉತ್ತರಕನ್ನಡದಿಂದ ಆಗಮಿಸಿದ ಆತನ ಕುಟುಂಬಿಕರು ಹಾಗೂ ಮನೆಯವರು ದಟ್ಟ ಹಾಡಿಯಲ್ಲಿ ಶವ ಕಾಯಬೇಕಾದ ಅನಿವಾರ್ಯತೆಯಿತ್ತು.

ಘಟನಾ ಸ್ಥಳಕ್ಕೆ ಬೈಂದೂರು ವ್ರತ್ತನಿರೀಕ್ಷಕ ಸುದರ್ಶನ್, ಗಂಗೊಳ್ಳಿ ಠಾಣೆ ಎಸ್ಸೈ ಸುಬ್ಬಣ್ಣ ಮೊದಲಾದವರು ಭೇಟಿ ನೀಡಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment