ಮುಂಬೈ: 2002 ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಖುಲಾಸೆ ತೀರ್ಪು ನೀಡುತ್ತಿದ್ದಂತೆ ನ್ಯಾಯಾಲಯದಲ್ಲೇ ಸಲ್ಮಾನ್ ಖಾನ್ ಕಣ್ಣೀರಿಟ್ಟರು.
ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧ ಜೈಲುವಾಸ ಭೀತಿ ಎದುರಿಸುತ್ತಿದ್ದ ಸಲ್ಮಾನ್ ಕೋರ್ಟ್ ತೀರ್ಪಿನಿಂದ ಭಾವುಕರಾದರು.
ಪೊಲೀಸರ ಶಂಕೆಯ ಮೇರೆಗೆ ನಟ ಸಲ್ಮಾನ್ ಖಾನ್ ರನ್ನು ಶಿಕ್ಷಿಸಲು ಸಾಧ್ಯವಿಲ್ಲ. ಅಲ್ಲದೆ ನಟ ಸಲ್ಮಾನ್ ಖಾನ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ ಎಂದು ನ್ಯಾಯಮೂರ್ತಿ ಎ.ಆರ್. ಜೋಷಿ ಹೇಳಿದ್ದಾರೆ.