ಕಾರವಾರ, ಡಿ.14-ವಂಚನೆ ಕೇಸ್ನಲ್ಲಿ ಜೈಲು ಸೇರಿದ ವಿಚಾರಣಾ ಖೈದಿ ಕಾರವಾರ ಜೈಲಿನಿಂದ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಚಂದ್ರಶೇಖರ್ ಹೊಸೂರು (45) ಪರಾರಿಯಾದ ಖೈದಿ. ನಿನ್ನೆ ರಾತ್ರಿ ಊಟಕ್ಕೆ ತೆರಳಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಪ್ರಕರಣವೊಂದರ ಸಂಬಂಧ ಹುಬ್ಬಳ್ಳಿಯಿಂದ ನ್ಯಾಯಾಲಯಕ್ಕೆ ಹಾಜರು ಮಾಡಿ ಕಾರವಾರಕ್ಕೆ ಕರೆ ತರಲಾಗಿತ್ತು. ಕಾರವಾರ ಜೈಲಿನಲ್ಲಿ ಖೈದಿಯಾಗಿದ್ದ. ಪರಾರಿಯಾಗಿರುವ ಈತನನ್ನು ಹುಡುಕಲು ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಕರ್ನಾಟಕ