ಕರ್ನಾಟಕ

ರಾಜಕೀಯಕ್ಕೆ ಆಪತ್ತು, ಶ್ರೀಮಂತರಿಗೆ ತೊಂದರೆ : ಕೋಡೀಮಠದ ಶ್ರೀಗಳ ಭವಿಷ್ಯ

Pinterest LinkedIn Tumblr

sriಹಾಸನ, ಡಿ.14-ರಾಜಕೀಯದಲ್ಲಿ ಆಪತ್ತು ಕಾದಿದೆ, ಅನಿಶ್ಚಿತ ಘಟನೆಗಳು ನಡೆಯಲಿವೆ. ಮುಂದೆ ನಡೆಯುವ ಚುನಾವಣಾ ಫಲಿತಾಂಶ ಅತಂತ್ರವಾಗಲಿದೆ ಎಂದು ಎಂದು ಕೋಡೀಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ರಾಜಕೀಯ ಘಟನೆಗಳು, ಪ್ರಕೃತಿ ವಿಕೋಪಗಳು, ಮುಂದಾಗಲಿರುವ ಅನಾಹುತಗಳ ಬಗ್ಗೆ ಭವಿಷ್ಯ ನುಡಿಯುವ ಶ್ರೀಗಳು ಈ ಬಾರಿ ಭವಿಷ್ಯ ಹೇಳಿದ್ದು, ರಾಜಕೀಯದಲ್ಲಿ ಅನಿಶ್ಚಿತ ಘಟನೆಗಳು ನಡೆದು ರಾಜಕಾರಣ ಅಪಾಯಗಳ ಹಂತಕ್ಕೆ ತಲುಪಲಿದೆ ಎಂದು ಹೇಳಿದ್ದಾರೆ.  ಮುಂದೆ ನಡೆಯುವ ಚುನಾವಣೆಗಳ ಫಲಿತಾಂಶ ಅತಂತ್ರವಾಗಲಿದೆ. ಯಾವುದೇ ಒಂದು ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.

ಈ ಬಾರಿ ಹಿಮಾಲಯಕ್ಕೆ ಅಪಾಯ ಕಾದಿದೆ. ನೆರೆಯ ರಾಷ್ಟ್ರಗಳಲ್ಲಿ ಭೂಕಂಪ ಹೆಚ್ಚಾಗಲಿದೆ. ಮಳೆ ಕೂಡ ಇನ್ನೂ ಹೆಚ್ಚಾಗಲಿದೆ ಎಂದು ನುಡಿದಿರುವ ಶ್ರೀಗಳು ಶ್ರೀಮಂತರಿಗೆ ಹೆಚ್ಚು ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.

Write A Comment