ರಾಷ್ಟ್ರೀಯ

ಜೀವ ಕೊಡುವ ಮಾತು ಬೇಡ, ಶತ್ರುಗಳ ಜೀವ ತೆಗೆಯಿರಿ : ಸೈನಿಕರಿಗೆ ರಕ್ಷಣಾ ಸಚಿವರ ಕರೆ

Pinterest LinkedIn Tumblr

289155-manoharಪಣಜಿ, ಡಿ.14: ‘ಜೀವ ಕೊಡುವ ಮಾತು ಬೇಡ. ಶತ್ರುಗಳ ಜೀವ ತೆಗೆಯಿರಿ ’ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕರ್ ಕರೆ ನೀಡಿದ್ದಾರೆ.

60ನೆ ಹುಟ್ಟು ಹಬ್ಬದ ಅಂಗವಾಗಿ ರಾಜ್ಯ ಬಿಜೆಪಿಯು ರವಿವಾರ ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಮಾತನಾಡಿದ ಅವರು ‘‘ಸೈನಿಕರು ದೇಶಕ್ಕಾಗಿ ಜೀವ ಕೊಡಲು ಸಿದ್ದರಾಗಿದ್ದಾರೆ. ಆದರೆ ಇದಕ್ಕೆ ನನ್ನ ವಿರೋಧ ಇದೆ.  ಅವರು ಯಾಕೆ ಸಾಯಬೇಕು. ? ಶತ್ರುಗಳನ್ನು ಕೊಲ್ಲಬೇಕು. ಕಳೆದ ಒಂದು ವರ್ಷದ ದಾಖಲೆಯನ್ನು ಗಮನಿಸಿದರೆ ಈ ವಿಚಾರ ಗೊತ್ತಾಗುತ್ತದೆ ’’ ಎಂದು ಅವರು ಹೇಳಿದರು.

Write A Comment