ರಾಷ್ಟ್ರೀಯ

ಗಣಿತ ಪ್ರಶ್ನೆಗಳಿಗೆ ಉತ್ತರಿಸದ ವರನನ್ನು ತಿರಸ್ಕರಿಸಿದ ವಧು!

Pinterest LinkedIn Tumblr

mathsಮಣಿಪುರ, ಡಿ.14: ಯುವತಿಯೊಬ್ಬಳು ಗಣಿತದ ಕೆಲವು ಪ್ರಶ್ನೆಗಳಿಗೆ ಉತ್ತರಿಸದ ಅವಿದ್ಯಾವಂತ ಯುವಕನನ್ನು ತಿರಸ್ಕರಿಸಿ 10ನೆ ತರಗತಿ ಪಾಸಾದ ಕೃಷಿಕನನ್ನು ಮದುವೆಯಾದ ಘಟನೆ ಮಣಿಪುರ ಜಿಲ್ಲೆಯಲ್ಲಿ ನಡೆದಿದೆ.

ಗುಲಿಯಾರ್‌ಪುರದ ಯುವತಿ ಖುಶ್ಬು ಅವಿದ್ಯಾವಂತ ಯುವಕನನ್ನು ತಿರಸ್ಕರಿಸಿ ಹೈಸ್ಕೂಲ್ ಪಾಸಾದ ಯುವಕ 21ರ ಹರೆಯದ ಅಮಿತ್‌ನನ್ನು ಮದುವೆಯಾದ ಯುವತಿ. ಅಮಿತ್ ಒರಿಯಾ ಜಿಲ್ಲೆಯ ಕೆಜ್ರಿ ದಿಬಿಯಾಪುರ ಗ್ರಾಮದ ನಿವಾಸಿ.

ಖುಶ್ಬು 8ನೆ ತರಗತಿ ತನಕ ಶಿಕ್ಷಣ ಪಡೆದಿದ್ದಳು. ಶಿಕ್ಷಕಿಯಾಗುವ ಕನಸು ಹೊಂದಿದ್ದಳು.ಇದಕ್ಕೂ ಮೊದಲು ಶ್ರಿಕೃಷ್ಣ ಬಾಬು ಸಕ್ಸೇನಾ ಪುತ್ತಿ ಖುಶ್ಬು ಮದುವೆ ಸಾರಾಯ ಗ್ರಾಮದ ರಾಜೇಂದ್ರ ಸಿಂಗ್ ಪುತ್ರ ಓಮ್‌ವೀರ್ ಜೊತೆಗೆ ಮಂಗಳವಾರ ನಿಗದಿಯಾಗಿತ್ತು.

ಇಡೀ ಗ್ರಾಮದ ಜನರು ಈ ಮದುವೆಯಲ್ಲಿ ಪಾಲಗೊಂಡಿದ್ದರು. ಆದರೆ ಹಸಮಣೆ ಏರಲು ಸಿದ್ದತೆ ಆರಂಭವಾಗುತ್ತಿದ್ದಂತೆ ಖುಶ್ಬು ಸ್ನೇತೆಯರು ಆಕೆಯ ಭಾವಿ ಪತಿಯನ್ನು ಪರೀಕ್ಷೆಗೆ ಒಳಪಡಿಸುವಂತೆ ಸಲಹೆ ನೀಡಿದರು. ಅದರಂತೆ ಖುಶ್ಬು ತನ್ನ ಭಾವಿ ಪತಿ ಓಮ್‌ವೀರ್‌ಗೆ ಕೆಲವು ಗಣಿತ ಪ್ರಶ್ನೆಗಳನ್ನು ಕೇಳಿದಳು. ಆದರೆ ಆತನಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಆತ ತನ್ನನ್ನು ಮದುವೆಯಾಗಲು ಎಂಬ ತೀರ್ಮಾನಕ್ಕೆ ಬಂದ ಯುವತಿ ಆತನನ್ನು ತಿರಸ್ಕರಿಸಿದಳು.

ಶುಕ್ರವಾರ ರಾತ್ರಿ ಖುಶ್ಬು ಮತ್ತು ಅಮಿತ್ ಮದುವೆ ನೆರವೇರಿತು.

Write A Comment