ಕನ್ನಡ ವಾರ್ತೆಗಳು

ವರ್ಗಾವಣೆ ವಿಚಾರ ಕೇವಲ ವದಂತಿ- ಪ್ರತಿಭಟನೆಗಳು ಬೇಡ ಪ್ಲೀಸ್…; ಎಸ್‌ಪಿ ಅಣ್ಣಾಮಲೈ

Pinterest LinkedIn Tumblr

ಉಡುಪಿ: ವರ್ಗಾವಣೆ ಬಗ್ಗೆ ಯಾವುದೇ ಊಹಾಪೋಹ, ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಈ ವಿಷಯದ ಸಂಬಂಧ ಸಾರ್ವಜನಿಕರು ಮತ್ತು ಸಂಘಟನೆಗಳು ಯಾವುದೇ ರೀತಿಯ ಪ್ರತಿಭಟನೆ ಮಾಡದಂತೆ ಉಡುಪಿ ಜಿಲ್ಲಾ ಎಸ್‌ಪಿ ಅಣ್ಣಾಮಲೈ ಕೆ. ವಿನಂತಿ ಮಾಡಿಕೊಂಡಿದ್ದಾರೆ.

Suchitra Murder_Sp Annamali_Visit Goliyangadi (17)

ವರ್ಗಾವಣೆಯ ಕುರಿತು ಪತ್ರಿಕಾ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಗಮನಿಸಿದ ಎಸ್‌ಪಿಯವರು ಈ ಪ್ರತಿಕ್ರಿಯೆ ನೀಡಿ ದ್ದಾರೆ. ವರ್ಗಾವಣೆ ಸರಕಾರದ ಆದೇಶದಂತೆ ನಡೆಯುವ ಪ್ರಕ್ರಿಯೆಯಾಗಿದ್ದು, ಇದರ ಬಗ್ಗೆ ಸಾರ್ವಜನಿಕರು ಯಾವುದೇ ಊಹಾಪೋಹ, ವದಂತಿಗಳಿಗೆ ಕಿವಿಗೊಟ್ಟು ಪ್ರತಿಭಟಿಸಬಾರದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Write A Comment