ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಹಲ್ಲೆ ಪ್ರಕರಣ, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆಂಬ ಆರೋಪಕ್ಕೆ ಜೈಲುಶಿಕ್ಷೆ ಅನುಭವಿಸಿ ವಿವಾದಗಳಿಂದಲೇ ಕೆಲವು ವಾರಗಳ ಹಿಂದೆ ಸುದ್ದಿಗೆ ಗ್ರಾಸವಾಗಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್ ಇದೀಗ ಗಾಯಕರಾಗಿ ಸುದ್ದಿಯಾಗಿದ್ದಾರೆ.
ಹೌದು ನಿರ್ದೇಶಕ ಯೋಗರಾಜ್ ಭಟ್ ಅವರ ಯೋಗರಾಜ್ ಮೂವೀಸ್ ಲಾಂಛನದಡಿಯಲ್ಲಿ ನಿರ್ಮಾಣವಾಗುತ್ತಿರುವ ಪರಪಂಚ ಸಿನಿಮಾಕ್ಕಾಗಿ ಹುಚ್ಚ ವೆಂಕಟ್ ಅವರಿಂದ ಹಾಡೊಂದನ್ನು ಹಾಡಿಸಿದ್ದಾರೆ. ಪರಪಂಚ ಚಿತ್ರದ ಇದೇ ಹಾಡಿನಲ್ಲಿ ವೆಂಕಟ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ.
ಕ್ರಿಶ್ ಜೋಶಿ ನಿರ್ದೇಶನದ ಪರಪಂಚ ಸಿನಿಮಾ ಮುಂದಿನ ವರ್ಷ ಜನವರಿ 1ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.
ಪರಪಂಚ ಚಿತ್ರದಲ್ಲಿ ತುಂಬಾ ಮಂದಿ ನಟರಿದ್ದಾರೆ. ಏತನ್ಮಧ್ಯೆ ಮತ್ತೊಂದು ಹಾಡನ್ನು ಸೇರಿಸುವ ಅಂತ ಯೋಚನೆ ಮಾಡಿ, ವೆಂಕಟ್ ಅವರ ಮೂಲಕ ಹುಟ್ಟಿದ ಊರನ್ನು ಬಿಟ್ಟು ಎಂಬ ಟೈಟಲ್ ಹಾಡಿನ ತುಣುಕೊಂದನ್ನು ಹಾಡಿಸಲಾಗಿದೆ ಎಂದು ಕ್ರಿಶ್ ಜೋಶಿ ಟೈಮ್ಸ್ ಆಫ್ ಇಂಡಿಯಾದ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ದಿಗಂತ್, ರಾಗಿಣಿ. ದತ್ತಣ್ಣ, ಅನಂತನಾಗ್, ವಿ.ಮನೋಹರ್, ಅಶೋಕ್, ಯೋಗರಾಜ್ಭಟ್, ಪಂಚರಂಗಿ ಸುಧಾಕರ್ ಮುಂತಾದವರು ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
-ಉದಯವಾಣಿ