ಕರ್ನಾಟಕ

ಜೆಡಿಎಸ್ ಬಗ್ಗೆ ಸಿದ್ದರಾಮಯ್ಯನವರು ಚಿಂತೆ ಮಾಡೋದು ಬೇಡ : ಎಚ್‌ಡಿಕೆ

Pinterest LinkedIn Tumblr

jds

ಕುಣಿಗಲ್, ಡಿ.15-ರಾಜ್ಯದ ಮುಖ್ಯಮಂತ್ರಿಗಳಿಗೆ ಜೆಡಿಎಸ್  ಬಗ್ಗೆಯಾಗಲಿ ಅಥವಾ ಅದು ಅಧಿಕಾರಕ್ಕೆ ಬರುವ ಕುರಿತಾಗಲಿ ಚಿಂತೆ ಬೇಡ, ಅದನ್ನು ಜನತೆ ತೀರ್ಮಾನಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ತಾಲೂಕಿನ ಕೊತ್ತಗೆರೆ ಹೋಬಳಿಯ ಕಾಮನಹಳ್ಳಿ ಗ್ರಾಮದಲ್ಲಿ ಶ್ರೀ ಹೊನ್ನಾದೇವಿ ಕಳಸ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿದ್ದರಾಮಯ್ಯನವರಿಗೆ ಜೆಡಿಎಸ್ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಅವರಿಗೆ ಅನುಕೂಲವಾಗುವಂತಹ ಒಳ್ಳೆಯ ಕಾರ್ಯಕ್ರಮ ರೂಪಿಸಲಿ ಎಂದು ಕಿವಿಮಾತು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ರಾಷ್ಟ್ರದ ಜನತೆ ನಂಬಿಕೆ ಮೇಲೆ ಬದುಕುತ್ತಿದ್ದು, ಅವರನ್ನು ಕಾಪಾಡುವ ಶಕ್ತಿ ಅದಕ್ಕಿದೆ. ಆದ್ದರಿಂದ ಈ ಮಹಾಮಾತೆ ಹೊನ್ನಾದೇವಿ ರೈತರಿಗೆ ಬದುಕುವ ಶಕ್ತಿ ಕೊಡಲಿ ಎಂದು ಹಾರೈಸಿದರು.

ಕೆಲವು ರೈತರು ದುಶ್ಚಟಕ್ಕೆ ಬಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಅರ್ಥವಿಲ್ಲದ ಮಾತನಾಡುತ್ತಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಂಡ 350 ಕುಟುಂಬಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಆದರೆ ಅವರ್ಯಾತರು ಕೂಡ ದುಶ್ಚಟಕ್ಕೆ ಬಲಿಯಾದವರಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಕುಟುಂಬದ ಬಗ್ಗೆ ದಯವಿಟ್ಟು ಚಿಂತಿಸಬೇಕೆಂದು ಅವರು ತಿಳಿ ಹೇಳಿದರು.

ಡಾ.ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡುತ್ತಾ, ಮಕ್ಕಳಿಗೆ ಸದ್ಬುದ್ಧಿಯನ್ನು ನೀಡಿ ಒಳ್ಳೆಯ ಮಾರ್ಗ ತೋರಿಸುವ ಜವಾಬ್ದಾರಿ ಪೋಷಕರದ್ದು ಎಂದು ನುಡಿದರು.  ಕಾರ್ಯಕ್ರಮದಲ್ಲಿ ಶಾಸಕ ಡಿ.ನಾಗರಾಜಯ್ಯ, ದೇವಸ್ಥಾನದ ಕೃಷ್ಣ, ಅಧ್ಯಕ್ಷ ಕೆ.ಎಂ.ಪ್ರಕಾಶ್, ಶೃಂಗೇರಿ ಪುರಸಭೆ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಜಿ.ಪಂ.ಸದಸ್ಯ ದೊಡ್ಡಯ್ಯ ಮುಂತಾದವರು ಉಪಸ್ಥಿತರಿದ್ದರು.

Write A Comment