ಕರ್ನಾಟಕ

ಮೆಟ್ರೋ ರೈಲಿಗೂ ಕರೆಂಟ್ ಶಾಕ್…!

Pinterest LinkedIn Tumblr

metroಬೆಂಗಳೂರು, ಡಿ.17- ನಗರದ ಹಲವೆಡೆ ಉಂಟಾಗಿರುವ ವಿದ್ಯುತ್ ವ್ಯತ್ಯಯ ಮೆಟ್ರೋ ರೈಲಿನ ಮೇಲೂ ಪರಿಣಾಮ ಬೀರಿದೆ.  ವಿದ್ಯುತ್ ವ್ಯತ್ಯಯದಿಂದಾಗಿ ಇಂದು ಬೆಳಗ್ಗೆ 7.30ರಿಂದಲೇ ಸಂಪಿಗೆ ರಸ್ತೆ- ರಾಜಾಜಿನಗರ ನಿಲ್ದಾಣ ನಡುವಿನ ಮೆ ಟ್ರೋ ರೈಲು ಸಂಚಾರ ಬಂದ್ ಆಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್ ನಿರ್ದೇಶಕ ವಸಂತ್‌ರಾವ್ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಇಲ್ಲದ ನಿಲ್ದಾಣಗಳಿಂದ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದಿದ್ದಾರೆ.

ರಾಜಾಜಿನಗರದಿಂದ ನಾಗಸಂದ್ರ ದವರೆಗೆ ಮೆಟ್ರೋ ರೈಲು ಸಂಚಾರ ಎಂದಿ ನಂತಿದೆ ಎಂದು ಅವರು ಹೇಳಿದ್ದಾರೆ.

Write A Comment