ಮಂಗಳೂರು,ಡಿ.18 : ಮಂಗಳೂರಿನ ಪಿಲಿಕುಲದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಡಿ.19 ಮತ್ತು 20 ರಂದು ರಾಜ್ಯ ಸರಕಾರದ ಆಯುಷ್ ಇಲಾಖೆ, ದ.ಕ ಜಿಲ್ಲಾಡಳಿತ, ಹಾಗೂ ಆಯುಷ್ ಫೌಂಢೇಶನ್ ಆಯೋಜಿಸಿರು ಆಯುಷ್ ಹಬ್ಬ – 2015 ರ ಉದ್ಘಾಟನ ಸಮಾರಂಭದ ಕಾರ್ಯಕಲಾಪಗಳನ್ನು ಮಂಗಳೂರು ಆಕಾಶವಾಣಿ ಕೇಂದ್ರವು ನೇರ ಪ್ರಸಾರ ಮಾಡಲಿದೆ.
ಡಿ,19 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಇದರ ಕಾರ್ಯಕಲಾಪಗಳನ್ನು ನೇರಪ್ರಸಾರ ಮಾಡಲಾಗುವುದು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ.
ಕೇಳುಗರು ಮಂಗಳೂರು ಆಕಾಶವಾಣಿಯ ಎಫ್ ಎಂ.100.3ಹಾಗೂ ಎಎಂ 1085 ಕಿಲೋಹರ್ಟ್ಸ್ ತರಂಗಾಂತರಗಳಲ್ಲಿ ಕಾರ್ಯಕ್ರಮ ಆಲಿಸಬಹುದು.