ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಹಾನಿ : ಸಂಸದ ನಳಿನ್‌ರವರಿಂದ ಕೇಂದ್ರ ಸಚಿವರಿಗೆ ಮನವಿ

Pinterest LinkedIn Tumblr

dehli_nalin_manavi

ನವದೆಹಲಿ,ಡಿ.18 : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗವು ಗುರುವಾರ ನವದೆಹಲಿಯಲ್ಲಿ ಪರಿಸರ ಮತ್ತು ಅರಣ್ಯ ಖಾತೆಯ ರಾಜ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಿ ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ನಿಯೋಗದ ಈ ಮನವಿಗೆ ಸ್ಪಂದಿಸಿರುವ ಸಚಿವರು, ದಕ್ಷಿಣ ಕನ್ನಡ ಜನತೆಯ ಹಿತಾಸಕ್ತಿಯನ್ನು ಕಾಪಾಡುವ ಭರವಸೆಯನ್ನು ನೀಡಿದ್ದಾರೆ.

ನಿಯೋಗದಲ್ಲಿ ನಿರಾವರಿ ತಜ್ಞ ಡಾ.ಎಸ್.ಜಿ. ಮಯ್ಯ , ನಿವೃತ್ತ ಐಎ‌ಎಸ್ ವಿ.ವಿ ಭಟ್, ಮಂಗಳೂರು ಮಹಾನಗರ ಪಾಲಿಕೆಯ ಉಪಾಅಯುಕ್ತ ಪುರುಷೋತ್ತಮ ಚಿತ್ರಾಪುಅರ , ಹಿರಿಯ ವಕೀಲ ಪ್ರಿನ್ಸ್ ಈಸಾಕ್, ಪರಿಸರ ಹೋರಾಟಗಾರರಾದ ಶಶಿರಾಜ್ ಶೆಟ್ಟಿ,ಕೊಲಂಬೆ, ಕೆ.ಎನ್.ಸೋಮಶೇಖರ್, ರಾಮಚಂದ್ರ ಬೈಕಾಂಪಾದಿ, ದಕ್ಷಿಣ ಕನ್ನಡ ಬಿಜೆಪಿ ಕಾರ್ಯದರ್ಶಿ ಸಂಜೀವ ಮಠಂದೂರು ಮೊದಲಾದವರು ಉಪಸ್ಥಿತರಿದ್ದರು.

Write A Comment