ಕನ್ನಡ ವಾರ್ತೆಗಳು

ಅರ್ಚಕರ ನಡುವಿನ ವಿವಾದ : ಒಂದೇ ಕುಟುಂಬದ ಮೂವರು ಆತ್ಮಹತ್ಯಗೆ ಯತ್ನ – ಅರ್ಚಕ ಸಾವು

Pinterest LinkedIn Tumblr

Karkala_sucide-attampt

ಕಾರ್ಕಳ, ಡಿ.19: ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಓರ್ವ ಮೃತಪಟ್ಟು ಇನ್ನಿಬ್ಬರು ಬದುಕುಳಿದ ಘಟನೆ ಕಾರ್ಕಳ ನಗರದ ಅನಂತಶಯನದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಅನಂತಶಯನದಲ್ಲಿರುವ ಅನಂತ ಪದ್ಮನಾಭ ದೇವರ ಅರ್ಚಕ ಗಣಪತಿ ಭಟ್(48) ಸಾವನ್ನಪ್ಪಿದವರು. ಅವರ ಪತ್ನಿ ಶ್ಯಾಮಲಾ (42) ಮತ್ತು ಮಗಳು ರಶ್ಮಿ(18) ಬದುಕುಳಿದಿದ್ದಾರೆ.

ಅನಂತಪದ್ಮನಾಭ ದೇವಳದಲ್ಲಿ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ದೇವರಿಗೆ ಪೂಜೆಯನ್ನು ನಿರ್ವಹಿಸುವ ಅರ್ಚಕರ ನಡುವಿನ ವಿವಾದ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.ಈಗಾಗಲೇ ಪೂಜೆ ಕಾರ್ಯ ನಿರ್ವಹಿಸುತ್ತಿದ್ದ ಅರ್ಚಕ ಗಣಪತಿ ಭಟ್ ಮತ್ತು ಆಡಳಿತ ಸಮಿತಿ ಬೆಂಬಲಿತ ಅರ್ಚಕ ರಾಜೇಶ್ ಭಟ್ ನಡುವೆ ವಿವಾದ ತಾರಕಕ್ಕೇರಿತ್ತು.

ಜೀವನ ನಿರ್ವಹಣೆಗೆ ತೀರಾ ದುರ್ಬಲವಾಗಿದ್ದ ಗಣಪತಿ ಭಟ್ ಹಲವಾರು ದಿನಗಳಿಂದ ವಿಪರೀತ ನೊಂದಿದ್ದು, ಪತ್ನಿ ಮತ್ತು ಮಗಳ ಸಹಿತ ಬಾವಿಗೆ ಹಾರಿದ್ದರು.

ಮುಂಜಾನೆ ಬಾವಿಯ ಮುಂದೆ ತಾಯಿ ಮತ್ತು ಮಗಳು ಚೀರಾಡುತ್ತಿರುವುದನ್ನು ಗಮನಿಸಿದ ಪತ್ರಿಕಾ ವಿತರಕರು, ತಕ್ಷಣ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಪರಿಣಾಮ ಗಣಪತಿ ಭಟ್ ಪ್ರಾಣ ಕಳೆದುಕೊಂಡಿದ್ದರೆ, ತಾಯಿ ಮತ್ತು ಮಗಳನ್ನು ಮೇಲಕ್ಕೆತ್ತಿ ಪ್ರಾಣ ಉಳಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾದರು.

Write A Comment