ಮುಂಬೈ,ಡಿ.20- ಮುಂಬರುವ ಚುಟುಕು ಕ್ರಿಕೆಟ್ ವಿಶ್ವ ಸಮರ ದವರೆಗೂ ಮಹೇಂದ್ರಸಿಂಗ್ ಧೋನಿಯೇ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಲಿದ್ದಾರೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಏಕದಿನ ಹಾಗೂ ಟ್ವೆಂಟಿ-20 ಸರಣಿಯ ಸೋಲಿನ ನಂತರ ಧೋನಿಯ ನಾಯಕತ್ವದ ಬಗ್ಗೆ ಭಾರೀ ಚರ್ಚೆಗಳಾಗಿದ್ದವು.
ಆದರೆ ನಿನ್ನೆ ನಡೆದ ಆಸ್ಟ್ರೇಲಿಯಾ ಸರಣಿಗೆ ಮಹೇಂದ್ರಸಿಂಗ್ ಧೋನಿಗೆ ನಾಯಕನ ಪಟ್ಟದ ಹೊರೆಯನ್ನು ಹೊರೆಸಲಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಕಹಿಯನ್ನು ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಗೆಲ್ಲುವ ಮೂಲಕ ಧೋನಿ ಮರೆಯಲಿದ್ದಾರೆ ಎಂದು ಸಂದೀಪ್ ಹೇಳಿದರು.
ಅಲ್ಲದೆ ಮುಂಬರುವ ವರ್ಷದಲ್ಲಿ ಭಾರತದಲ್ಲೇ ನಡೆಯುವ ಚುಟುಕು ವಿಶ್ವಕಪ್ನಲ್ಲಿ ತಂಡದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಬೇಕಾದರೆ ಧೋನಿಯ ಸಾರಥ್ಯ ಅವಶ್ಯಕ ಎಂದರು.