ರಾಷ್ಟ್ರೀಯ

ದಾವೂದ್ ಕಾರು ಸುಟ್ಟ ಹಿಂದು ಮಹಾಸಭಾ

Pinterest LinkedIn Tumblr

NATION_111ಗಾಜಿಯಾಬಾದ್: ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಹಳೆಯ ಕಾರನ್ನು ಇತ್ತೀಚೆಗಷ್ಟೇ ಹರಾಜಿನ ಮೂಲಕ ಪಡೆದುಕೊಂಡಿರುವ ಹಿಂದು ಮಹಾಸಭಾ ಅದನ್ನು ಸುಟ್ಟುಹಾಕಿದೆ.

ಸಭಾದ ಕಾರ್ಯಕರ್ತರು ಗಾಜಿಯಾಬಾದ್​ನ ಇಂದಿರಾಪುರಂನಲ್ಲಿ ಸಾರ್ವಜನಿಕವಾಗಿ ಬೆಂಕಿ ಹಚ್ಚುವ ಮೂಲಕ ಕಾರನ್ನು ಸುಟ್ಟರು. ಭಯೋತ್ಪಾದನೆ ವಿರುದ್ಧ ಸಾಂಕೇತಿಕ ಪ್ರತಿಭಟನೆಯಾಗಿ ಕಾರನ್ನು ದಹಿಸಲಾಗಿದೆ ಎಂದು ಹಿಂದು ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.

ಹಸಿರುಬಣ್ಣದ ಹುಂಡೈ ಎಕ್ಸೆಂಟ್ ಕಾರನ್ನು ಡಿ. 9ರಂದು ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ 3.2 ಲಕ್ಷ ರೂ. ನೀಡಿ ಹಿಂದು ಮಹಾಸಭಾ ಖರೀದಿಸಿತ್ತು. 15,700 ರೂ. ಬೆಲೆಯ 15 ವರ್ಷ ಹಳೆಯ ಈ ಕಾರಿಗೆ ಹರಾಜಿನಲ್ಲಿ 4,000 ರೂ. ಮೂಲ ಬೆಲೆ ನಿಗದಿಪಡಿಸಲಾಗಿತ್ತು. ದಾವೂದ್​ಗೆ ಸೇರಿದ್ದ ಹೋಟೆಲ್, ರೂಮ್ ಮತ್ತಿತರ ಅನೇಕ ಸೊತ್ತುಗಳನ್ನೂ ಡಿ.9ರಂದು ಹರಾಜು ಹಾಕಲಾಗಿತ್ತು.

Write A Comment