ರಾಷ್ಟ್ರೀಯ

ಅನುಪಮ್ ಖೇರ್ ಗೆ ಕಾಶ್ಮೀರದ ಇತಿಹಾಸ ಗೊತ್ತಿಲ್ಲ: ಜೆಡಿಯು

Pinterest LinkedIn Tumblr

anupam-kherfffನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಅಧಿಕಾರಗಳನ್ನು ನೀಡಿರುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವುದರ ಪರವಾಗಿ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರ ವಿರುದ್ಧ ಜೆಡಿಯು ವಾಗ್ದಾಳಿ ನಡೆಸಿದೆ.

ಬಿಜೆಪಿಯ ಹೊಸ ವಕ್ತಾರ ಅನುಪಮ್ ಖೇರ್ ಅವರಿಗೆ ಕಾಶ್ಮೀರದ ಇತಿಹಾಸ ಗೊತ್ತಿಲ್ಲ 370 ನೇ ವಿಧಿ ಪ್ರಕಾರ  ಜಮ್ಮು-ಕಾಶ್ಮೀರಕ್ಕೆ ವಿಶೇಶ ಅಧಿಕಾರ ನಿಡಿದಾಗ ಅನುಪಮ್ ಖೇರ್ ಇನ್ನೂ ಬಾಲಕನಾಗಿದ್ದರು ಎಂದು ಎಂದು ಜೆಡಿಯು ಮುಖಂಡ ಕೆಸಿ ತ್ಯಾಗಿ ಹೇಳಿದ್ದಾರೆ.

ಕಾಶ್ಮೀರದ ಸಮಸ್ಯೆ ಬಗೆಹರಿಯಬೇಕಾದರೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಬೇಕು ಎಂದು ಅನುಪಮ್ ಖೇರ್ ಅಭಿಪ್ರಾಯಪಟ್ಟಿದರು. ಜಮ್ಮುವಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಅನುಪಮ್ ಖೇರ್, ಕಾಶ್ಮೀರದಲ್ಲಿ ದೇಶದ ಇತರ ರಾಜ್ಯಗಳ ಜನರೂ ಭೂಮಿ ಖರೀದಿಸುವಂತಾದರೆ ಮಾತ್ರ ಅಲ್ಲಿನ  ಸಮಸ್ಯೆ ಬಗೆಹರಿಯಲಿದೆ ಎಂದು ಅನುಪಮ್ ಖೇರ್ ಹೇಳಿದ್ದರು.

Write A Comment