ಹಳಿಯಾಳ: ಗ್ರಾಮ ವಾಸ್ತವ್ಯಕ್ಕಾಗಿ ಸಚಿವ ಆಂಜನೇಯ ಅವರು ಸಿದ್ದಿ ಜನಾಂಗದ ಹಾಡು ಗ್ರಾಮಕ್ಕೆ ತೆರಳಿದ್ದಾರೆ. ಹಾಡು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಸಲುವಾಗಿ ಗುರುವಾರ ಹಳಿಯಾಳಕ್ಕೆ ಆಗಮಿಸಿದ ಆಂಜನೇಯ ಅವರನ್ನು ಕೈಗಾರಿಕಾ ಸಚಿವ ಹಾಗೂ ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಆತ್ಮೀಯವಾಗಿ ಬರಮಾಡಿಕೊಂಡರು.
ಆಂಜನೇಯ ಅವರನ್ನು ರುಡ್ಸೆಟ್ಗೆ ಕರೆದೊಯ್ದ ದೇಶಪಾಂಡೆ ಕುಶಲೋಪರಿ ವಿಚಾರಿಸಿದರು. ಗುರುವಾರ ರಾತ್ರಿ ಹಾಡು ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ಸಚಿವ ಆಂಜನೇಯ ಅವರು ಹೊಸ ವರ್ಷಾಚರಣೆಯನ್ನು ಸಿದ್ದಿಜನಾಂಗದ ಜತೆಗೆ ಆಚರಿಸಲಿದ್ದಾರೆ.