ನವದೆಹಲಿ: ನೆರೆಯ ರಾಷ್ಟ್ರವಾದ ಪಾಕ್ನೊಂದಿಗೆ ಒಳ್ಳೆಯ ಸಂಬಂಧಗಳನ್ನು ಭಾರತ ಬಯಸುತ್ತದೆ. ಆದರೆ ಅದೇ ವೇಳೆ ನಡೆಯುವ ಉಗ್ರರ ದಾಳಿಗೂ ಸರಿಯಾದ ಪ್ರತ್ಯುತ್ತರ ನೀಡುತ್ತದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವ ರಾಜನಾಥ್ ಸಿಂಗ್, ಪಾಕ್ ಸೇರಿದಂತೆ ಎಲ್ಲ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿಯಿಂದ ಇರಲು ಭಾರತ ಬಯಸುತ್ತದೆ.
ಆದರೆ ಉಗ್ರರ ದಾಳಿಗೆ ಪ್ರತ್ಯುತ್ತರ ನೀಡುವಷ್ಟು ನಮ್ಮ ಸೇನೆ ಸಮರ್ಥವಾಗಿದೆ ಎಂದಿದ್ದಾರೆ. ಭಾರತ-ಪಾಕ್ ಶಾಂತಿ ಮಾತುಕತೆ ಕುರಿತಂತೆ ವರದಿಗಾರರ ಪ್ರಶ್ನೆಗೆ ಉತ್ತರಿಸಿ ಸಚಿವ ಸಿಂಗ್ ಮೇಲಿನಂತೆ ಹೇಳಿದ್ದಾರೆ.