ಕರ್ನಾಟಕ

ಮೋದಿ ಭಾಷಣದ ವೇಳೆ ನಿದ್ದೆಗೆ ಜಾರಿದ್ದ ಸಿದ್ದರಾಮಯ್ಯ

Pinterest LinkedIn Tumblr

cm

ಮೈಸೂರು: ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಭಾನುವಾರ ‘103ನೇ ಭಾರತೀಯ ವಿಜ್ಞಾನ ಸಮಾವೇಶ’ವನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರೆಗೆ ಜಾರಿದ್ದರು.

ಸಭಿಕರ ಭಾರಿ ಕರತಾಡನದ ನಡುವೆ ಮೋದಿ ಅವರು ನುಸ್ಥಿರ ನಗರಾಭಿವೃದ್ಧಿ ಯೋಜನೆ ಕುರಿತು ಮಾತಿನ ಪ್ರವಾಹ ಮುಂದುವರೆಸಿದ್ದರೆ, ಮುಖ್ಯಮಂತ್ರಿ ಅವರನ್ನು ಮಾತ್ರ ನಿದ್ರಾದೇವಿ ಆವರಿಸಿತ್ತು.

ಪ್ರಧಾನಿಗಳ ಮಾತು ಮುಗಿದ ನಂತರ ಎದ್ದು ನಿಂತ ಸಿದ್ದರಾಮಯ್ಯ ಅವರು, ಶತಮಾನೋತ್ಸವದ ಸಡಗರದಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಸ್ಥಾನಮಾನ ಕಲ್ಪಿಸಬೇಕು ಎಂದು ಮನವಿ ಮಾಡಿ, ಅದರ ಎಲ್ಲಾ  ಅರ್ಹತೆಯು ಈ ವಿಶ್ವವಿದ್ಯಾನಿಲಯಕ್ಕೆ ಇದೆ ಎಂದರು.

Write A Comment