ಉಡುಪಿ: ನಾನು ಸುರಕ್ಷಿತವಾಗಿ ಇದ್ದೇನೆ ನನ್ನ ಬಗ್ಗೆ ತಲೆ ಬಿಸಿ ಬೇಡ ನಾನು ಮನೆಗೆ ಬರುವುದಿಲ್ಲ ನೀವು ತುಂಬಾ ದ್ರೋಹಿಗಳು ಎಂದು ಫೋನನ್ನು ಬಂದ್ ಮಾಡಿದ ಮಗನ ಸುಳಿವಿಲ್ಲದೇ ಇಂದಿಗೆ ಹದಿನೈದು ದಿನಗಳಾಗಿದೆ. ಈ ಬಗ್ಗೆ ಆತನ ಪೋಷಕರು ಉಡುಪಿ ನಗರ ಠಾಣೆಗೆ ದೂರನ್ನು ನೀಡಿದ್ದಾರೆ.
ಉಡುಪಿಯ ಅಂಬಲಪಾಡಿ ನಿವಾಸಿ ಪ್ರದೀಪ್ ಆಚಾರ್ಯ (21) ಮನೆಯಿಂದ ನಾಪತ್ತೆಯಾದ ಯುವಕ.
ಡಿ.20ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಮನೆಯಿಂದ ಹೋರಹೋದ ಪ್ರದೀಪ್ ರತ್ರಿಯಾದರೂ ಮನೆಗೆ ಬಂದಿರಲಿಲ್ಲ. ಆತನ ತಾಯಿ ಮೊಬೈಲ್ ಗೆ ಪೋನ್ ಮಾಡಿದಾಗ ‘ಇಂದು ಬರುವುದಿಲ್ಲ ನನ್ನ ತಲೆ ಸರಿಯಿಲ್ಲ ನಾಳೆ ಬರುತ್ತೇನೆ’ ಎಂದು ಬೇಸರದಿಂದಲೇ ನುಡಿದಿದ್ದ ಎನ್ನಲಾಗಿದೆ. ಬಳಿಕ ಆತನ ಸುಳಿವಿಲ್ಲದಿದ್ದು ಡಿ. 25ರಂದು 8:30ಕ್ಕೆ ಕರೆ ಮಾಡಿದ ಪ್ರದೀಪ ‘ ನಾನು ಸುರಕ್ಷಿತವಾಗಿ ಇದ್ದೇನೆ ನನ್ನ ಬಗ್ಗೆ ತಲೆ ಬಿಸಿ ಬೇಡ ನಾನು ಮನೆಗೆ ಬರುವುದಿಲ್ಲ ನೀವು ತುಂಬಾ ದ್ರೋಹಿಗಳು’ ಎಂದು ಹೇಳಿ ಪೋನ್ ಬಂದ್ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.