ರಾಯ್ಪುರ: ಕಮಾಂಡರ್ ದರ್ಜೆಯ ಕ್ಯಾಡರ್ ಸೇರಿದಂತೆ ಇಬ್ಬರು ನಕ್ಸಲರು ಛತ್ತೀಸಗಢದಲ್ಲಿ ಮಂಗಳವಾರ ಶರಣಾಗಿದ್ದಾರೆ. ಒಬ್ಬನನ್ನು ಬಂಧಿಸುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕೊಂಡಗಾನ ಜಿಲ್ಲೆಯಲ್ಲಿ ಮರ್ದಾಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಧುರ್ ಗ್ರಾಮದ ದಟ್ಟಾರಣ್ಯದಲ್ಲಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಕಾಳಗ ನಡೆದಿತ್ತು.
ಜೀವ ಭಯದಿಂದ ಇಬ್ಬರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದರು. ಮತ್ತೊಬ್ಬ ಪ್ರತಿದಾಳಿಕೋರನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.