ನಿರ್ಮಾಪಕ ಕೆ ಮಂಜು ರಾಕಿಂಗ್ ಸ್ಟಾರ್ ಯಶ್ ಮತ್ತು ಆದಿತ್ಯರನ್ನು ಒಟ್ಟಿಗೆ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದರು. ಆದ್ರೆ ಇನ್ನೂ ಹೆಸರಿಡದ ಈ ಚಿತ್ರದಿಂದ ಆದಿತ್ಯ ಹೊರಬಂದಿದ್ದಾರೆ ಅನ್ನೋದು ಇದೀಗ ಲೇಟೆಸ್ಟ್ ಸುದ್ದಿ. ಯಾಕೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೇಸ್ ನಂಬರ್ 18/9 ಖ್ಯಾತಿಯ ನಿರ್ದೇಶಕ ಮಹೇಶ್ ರಾವ್ ಈ ಚಿತ್ರವನ್ನು ಡೈರೆಕ್ಟ್ ಮಾಡ್ತಿದ್ದಾರೆ. ಯಶ್ ಹೀರೋ ಆಗಿ, ಆದಿತ್ಯ ಅವರೆದುರು ಆಂಟಿ ಹೀರೋ ಆಗಿ ನಟಿಸೋದು ಅಂತ ಡಿಸೈಡ್ ಆಗಿತ್ತು. ಆದ್ರೆ ಅದೇನಾಯ್ತೋ ಗೊತ್ತಿಲ್ಲ ಆದಿತ್ಯ ಈ ತಂಡದಿಂದ ಹೊರಬಂದಿದ್ದಾರೆ.
ಈ ಚಿತ್ರದ ಶೂಟಿಂಗ್ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ನಡೆಯಬೇಕಿತ್ತಂತೆ. ಇದಕ್ಕೆ ಆದಿತ್ಯ ಲುಕ್ನಲ್ಲಿ ಸಖತ್ ಡಿಫರೆಂಟ್ ಪ್ರಯತ್ನ ಮಾಡಲಾಗ್ತಿದೆ. ಪಾತ್ರಕ್ಕಾಗಿ ಆದಿತ್ಯ ಗಡ್ಡ, ಮೀಸೆಯನ್ನು ಬೆಳೆಸಬೇಕಂತೆ. ಆದ್ರೆ ಆದಿತ್ಯ ಇದೇ ಟೈಮಲ್ಲಿ ಇನ್ನೊಂದು ಚಿತ್ರದಲ್ಲೂ ಅಭಿನಯಿಸ್ತಾ ಇದ್ದಾರೆ. ಹಾಗಾಗಿ ಎರಡೆರಡು ಚಿತ್ರಕ್ಕೆ ಬೇರೆ ಬೇರೆ ಲುಕ್ಗಳನ್ನು ಒಂದೇ ಟೈಮಲ್ಲಿ ಮೇಂಟೇನ್ ಮಾಡೋದು ಕಷ್ಟವಾಗುತ್ತೆ ಅನ್ನೋ ಕಾರಣಕ್ಕೆ ಆದಿತ್ಯ ಹೊರಹೋಗಿದ್ದಾರೆ ಅನ್ನೋದು ಇದರ ಹಿಂದಿನ ವಿಚಾರ.
ಏನೇ ಆದ್ರೂ ಶೂಟಿಂಗ್ ಶುರುವಾಗೋ ಮುಂಚೆಯೇ ಹೀಗೆ ಮೇಜರ್ ಸರ್ಜರಿ ಆಗಿರೋದ್ರಿಂದ ಆದಿತ್ಯ ಜಾಗಕ್ಕೆ ಇನ್ಯಾರು ಬರ್ತಾರೆ ಅನ್ನೋ ಕುತೂಹಲವಂತೂ ಇದ್ದೇ ಇದೆ.