ಕರ್ನಾಟಕ

ಒಂದೇ ಮನೆಯಲ್ಲಿ ವಿವಾಹಿತೆ-ಯುವಕ ಸಾವಿಗೆ ಶರಣು.. ಅನೈತಿಕ ಸಂಬಂಧ ಶಂಕೆ

Pinterest LinkedIn Tumblr

arunammದೇವನಹಳ್ಳಿ: ಒಂದೇ ಮನೆಯಲ್ಲಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಹರಳೂರು ಗ್ರಾಮದಲ್ಲಿ ನಡೆದಿದ್ದು, ಇವರಿಬ್ಬರ ನಡುವಿನ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ವಿವಾಹಿತೆ ಅರುಣಮ್ಮ (35) ಮತ್ತು ಅವಿವಾಹಿತ ಮಂಜುನಾಥ್ (30) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಅರುಣಮ್ಮ ಮದುವೆಯಾಗಿ 17 ವರ್ಷಗಳು ಕಳೆದಿತ್ತು. ಅಲ್ಲದೇ ಅರುಣಮ್ಮಳಿಗೆ ಇಬ್ಬರು ಗಂಡು ಮಕ್ಕಳಿದ್ದು, ಕಾಲೇಜಿನಲ್ಲಿ ಓದುತ್ತಿದ್ದಾರೆ. ಇತ್ತ ಮಂಜುನಾಥ್ ಕೂಡ ಇದೇ ಗ್ರಾಮದವನಾಗಿದ್ದು, ಇನ್ನೂ ಮದುವೆ ಆಗಿಲ್ಲ. ಮಂಜುನಾಥ್‌‌ನಿಗೆ ಅರುಣಮ್ಮಳ ಜೊತೆ 5 ವರ್ಷಗಳಿಂದ ಪರಿಚಯವಿದ್ದು, ಆಗಾಗ ಮನೆಗೆ ತೆರಳುತ್ತಿದ್ದ ಎನ್ನಲಾಗಿದೆ.

ನಿನ್ನೆ ಅರುಣಮ್ಮನ ಮನೆಗೆ ಪ್ರಿಯಕರ ಮಂಜುನಾಥ್ ತೆರಳಿದ್ದು, ಮನೆಯಲ್ಲೇ ಇಬ್ಬರು ವಿಷ ಸೇವಿಸಿ ನಂತರ ಕಿರುಚಾಡಿದ್ದಾರೆ. ಇದನ್ನ ಗಮನಿಸಿದ ಅಕ್ಕಪಕ್ಕದವರು ತಕ್ಷಣ ಬಾಗಿಲು ಮುರಿದು, ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಆದ್ರೆ ಅರುಣಮ್ಮ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈಕೆಯ ಪ್ರಿಯಕರ ಯಲಹಂಕ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆದ್ರೆ ಮರ್ಯಾದೆಗೆ ಅಂಜಿರುವ ಅರುಣಮ್ಮ ಕುಟುಂಬದವರು ಮಂಜುನಾಥ ಹಾಗೂ ಅರುಣಮ್ಮಳ ನಡುವೆ ಈ ಹಿಂದೆ ಜಗಳವಿದ್ದು, ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಗೆ ಬಂದ ಆತ ಅರುಣಮ್ಮಗೆ ವಿಷ ಕುಡಿಸಿ ತಾನು ಕುಡಿದಿದ್ದಾನೆ ಅಂತಾ ಹೇಳ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‍ಪಿ ನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Write A Comment