ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹನಿ ಟ್ರ್ಯಾಪ್ ಪ್ರಕರಣವೊಂದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹನಿ ಟ್ರ್ಯಾಪ್ ಜಾಲದಲ್ಲಿ ಮಹಿಳೆ ಸೇರಿದಂತೆ ಮೂವರು ಸುಲಿಗೆಕೋರರನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ಮಂಚೇಗೌಡನ ಕೊಪ್ಪಲುನ ನಿವಾಸಿ ಅಮ್ರಿನ್ ಸಬಾ (24), ಈಕೆಯ ಸಹಚರರಾದ ರಾಜೀವ್ ನಗರದ ಜಾವೇದ್ (22) , ಮಂಡಿ ಮೊಹಲ್ಲಾ ನಿವಾಸಿ ತೌಸಿಫ್ (23) ಬಂಧಿತರು. ಈ ಆಸಾಮಿಗಳು ಶ್ರೀಮಂತರು ಮತ್ತು ಗಣ್ಯ ವ್ಯಕ್ತಿಗಳ ಮಕ್ಕಳನ್ನು ಸ್ನೇಹದ ಮೂಲಕ ಬಲೆಗೆ ಕೆಡವಿಕೊಂಡು ಸುಲಿಗೆ ನಡೆಸುತ್ತಿದ್ದರು.
ಮಿಂಚಿನ ಕಾರ್ಯಾಚರಣೆ ಮೂಲಕ ಉದಯಗಿರಿ ಠಾಣೆ ಪೊಲೀಸರು ಹನಿಟ್ರ್ಯಾಪ್ ಜಾಲವನ್ನು ಭೇದಿಸಿ ಸುಲಿಗೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ.