ಮಂಗಳೂರು,ಜ.12: ಮಂಗಳೂರು ವಿಶ್ವ ವಿದ್ಯಾನಿಲಯ, ವಿಶ್ವ ವಿಧ್ಯಾನಿಲಯ ಕಾಲೇಜು ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿಂದ ಪ್ರಯುಕ್ತ ಇಂದಿನಿಂದ ಜ 18ರವರೆಗೆ ರಾಷ್ಟ್ರೀಯ ಯುವ ದಿನಾಚರಣೆಯನ್ನು ವಿಶ್ವ ವಿಧ್ಯಾನಿಲಯ ಕಾಲೇಜಿನ ಕಲಾಭವನದಲ್ಲಿ ಆಯೋಜಿಸಲಾಗಿದ್ದು, ಇದರ ಉದ್ಘಾಟನೆಯನ್ನು ಮಂಗಳೂರು ವಿಶ್ವ ವಿಧ್ಯಾನಿಲಯದ ಕುಲಪತಿ ಪ್ರೋ.ಕೆ.ಬೈರಪ್ಪ ನೆರವೇರಿಸಿದ್ದರು.
ಈ ಸಂಧರ್ಭದಲ್ಲಿ ಪುತ್ತೂರು ವಿವೇಕಾನಂದ ಮಹಾವಿಧ್ಯಾನಿಲಯ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದರು. ಕಾರ್ಯುಕ್ರಮದಲ್ಲಿ ವಿಶ್ವ ವಿಧ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ ಉದಯ ಕುಮಾರ್ , ವಿಧ್ಯಾರ್ಥಿ ಸಂಘದ ಉಪನಿರ್ದೇಶಕ ಡಾ.ಎ ಹರೀಶ್ ವಿಧ್ಯಾರ್ಥಿ ಮುಖಂಡರುಗಳಾದ ನೀತಾ ರಶ್ಮಿ ಎಮ್, ನವೀನ್ ಸಪಲ್ಯ, ಲತೀಶ್, ನಿತೀಶ್ ಕುಮಾರ , ಸುಪ್ರೀತಾ ಸಿ ಮೊದಲಾದವರು ಉಪಸ್ಥಿತರಿದ್ದರು.
ನಾಗಪ್ಪ ಆರ್ ಗೌಡ ಕಾರ್ಯಕ್ರಮ ನಿರೂಪಿಸಿದರು.