ಕನ್ನಡ ವಾರ್ತೆಗಳು

ನ್ಯಾನೋ ಪಲ್ಟಿ: ಉಡುಪಿಯ ಟೆಕ್ಕಿ ದಂಪತಿ ಅಪಘಾತಕ್ಕೆ ಬಲಿ : ಮಕ್ಕಳ ಸ್ಥಿತಿ ಗಂಭೀರ.

Pinterest LinkedIn Tumblr

hasna_acdent_photo

ಹಾಸನ,ಜ.12:  ಜಿಲ್ಲೆಯ ಚನ್ನರಾಯಪಟ್ಟಣ ಬಳಿ ಚಿಕ್ಕಗೊಂಡನಹಳ್ಳಿ ಗದ್ದೆ ಬಳಿ ನ್ಯಾನೋ ಕಾರು ಪಲ್ಟಿಯಾಗಿ ಉಡುಪಿ ಪೆರ್ಣಂಕಿಲದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಸ್ವಾಮಿ ಮತ್ತು ಆದರ್ಶ ಎಂಬ ಮಕ್ಕಳು ಗಾಯಗೊಂಡಿದ್ದು, ಅವರನ್ನು ಹಿರೀಸಾವೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರನ್ನು ಅಶೋಕ್‌ ಪ್ರಭು(45) ಮತ್ತು ಅಶ್ವಿ‌ನಿ ಪ್ರಭು(35) ಎಂದು ಗುರುತಿಸಲಾಗಿದ್ದು, ಪ್ರಭು ಅವರು ಕುಟುಂಬ ಸಮೇತ ಉಡುಪಿಯ ಪೆರ್ಣಂಕಿಲದ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಶೋಕ್‌ ಅವರು ಬೆಂಗಳೂರಿನ ಕಾನ್ಯೆಂಟ್ರಿಕ್ಸ್‌ ಕಂಪೆನಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿದ್ದರು.

 

ಪ್ರಕರಣವನ್ನು ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಿರಿ…

Write A Comment