ಕರ್ನಾಟಕ

ವೃದ್ಧೆಯನ್ನು ಕೊಲೆಗೈದು ನಗದು-ಚಿನ್ನಾಭರಣ ಲೂಟಿ ಮಾಡಿದ ದರೋಡೆಕೋರರು

Pinterest LinkedIn Tumblr

haveri

ಹಾವೇರಿ: ಮನೆಯಲ್ಲಿದ್ದ ವೃದ್ಧೆಯನ್ನು ಹತ್ಯೆಗೈದು ಚಿನ್ನಾಭರಣ ಮತ್ತು ನಗದು ಹಣ ದೋಚಿ ಕಳ್ಳರು ಪರಾರಿಯಾದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಗ್ರಾಮದ ಬಳಿಯ ವರ್ಕರ್ಸ್ ಕಾಲೋನಿಯಲ್ಲಿ ನಡೆದಿದೆ.

60 ವರ್ಷದ ಜಯಮ್ಮ ಎಂಬ ಮಹಿಳೆಗೆ ದುಷ್ಕರ್ವಿುಗಳು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಜಯಮ್ಮಳ ಸೊಸೆ ಮತ್ತು ಮೊಮ್ಮಗಳ ಮೇಲೂ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಒಳಗಾದ ಸೊಸೆ ಹಾಗೂ ಮೊಮ್ಮಗಳು ಕಿರುಚಿಕೊಂಡ ಪರಿಣಾಮ ಕಳ್ಳರು ಮನೆಯಿಂದ ಪರಾರಿಯಾಗಿದ್ದಾರೆ.

ಪ್ರಕರಣ ಕುಮಾರಪಟ್ಟಣ್ಣಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಕಳ್ಳರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

Comments are closed.