ಕರ್ನಾಟಕ

ಉದ್ಯೋಗಿಯನ್ನು ಅಡ್ಡಗಟ್ಟಿ ದರೋಡೆ

Pinterest LinkedIn Tumblr

crime-1-2ಬೆಂಗಳೂರು, ಆ ೨೨- ಸ್ನೇಹಿತನನ್ನು ಬಿಡಲು ಬೈಕ್‌ನಲ್ಲಿ ಹೋಗುತ್ತಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್ ಹಾಗೂ ಎಟಿಎಂ ಕಾರ್ಡ್‌ನ್ನು ದೋಚಿ ಪರಾರಿಯಾದ ಘಟನೆ ಕೋರಮಂಗಲದಲ್ಲಿ ನಡೆದಿದೆ.

ಮಡಿವಾಳದ ಖಾಸಗಿ ಸಂಸ್ಥೆಯ ಸೌರವ್ ರಾಯ್ ಇಂದು ಮುಂಜಾನೆ ೨ಗಂಟೆಯ ವೇಳೆ ಸ್ನೇಹಿತನನ್ನು ಬಿಡಲು ಕೋರಮಂಗಲದ ಬಾಷ್ ಸಂಸ್ಥೆ ಬಳಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸೌರವ್ ಅವರನ್ನು ಅಡ್ಡಗಟ್ಟಿ ಈ ಕೃತ್ಯವೆಸಗಿದ್ದಾರೆ.

ಘಟನೆಯಲ್ಲಿ ಸೌರವ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಬೆದರಿಸಿ ಆತನ ಬಳಿಯಿದ್ದ ಮೊಬೈಲ್ ಹಾಗೂ ಸಿಮ್ ಕಾಡ್ ಹಾಗೂ ಎಟಿಎಂ ಕಾರ್ಡ್‌ಗಳಿದ್ದ ಪರ್ಸ್‌ನ್ನು ದೋಚಿ ಪರಾರಿಯಾಗಿದ್ದಾರೆ. ಕೋರಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Comments are closed.