ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಸ್ವಾತಿ , ರಮೇಶ, ಕಾವ್ಯಾಂಜಲಿ
ಬೆಂಗಳೂರು: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಬಿ. ಸ್ವಾತಿ, ವಾಣಿಜ್ಯ ವಿಭಾಗದಲ್ಲಿ ವರ್ಷಿಣಿ ಎಂ. ಭಟ್, ವಿಜ್ಞಾನ ವಿಭಾಗದಲ್ಲಿ ಎಂ. ಕೃತಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ 595 ಅಂಕ ಗಳಿಸುವುದರ ಮೂಲಕ ಸಾಧನೆಗೈದ ಬಿ. ಸ್ವಾತಿ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಇಂದೂ ಕಾಲೇಜಿನ ವಿದ್ಯಾರ್ಥಿನಿ. ಇನ್ನೂ ಎರಡನೇ ಮತ್ತು ಮೂರನೇ ಸ್ಥಾನವನ್ನು ಇದೇ ಕಾಲೇಜಿನ ರಮೇಶ (593), ಕಾವ್ಯಾಂಜಲಿ (588) ಗಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ವಿದ್ಯಾಮಂದಿರ ಇಂದೂ ಪಿಯು ಕಾಲೇಜಿನ ವರ್ಷಿಣಿ ಎಂ. ಭಟ್ ಅವರು ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದು ಈ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜಿನ ಎಂ. ಕೃತಿ ವಿಜ್ಞಾನ ವಿಭಾಗದಲ್ಲಿ 597 ಅಂಕಗಳ ಮೂಲಕ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.
Comments are closed.