ಕರಾವಳಿ

ಕ್ಷೇತ್ರದ ಜನರಿಗೆ ನಗರದ ಅಭಿವೃದ್ಧಿ ಮುಖ್ಯ : ಕಾಂಗ್ರೆಸ್ ದಕ್ಷಿಣ ಅಭ್ಯರ್ಥಿ ಜೆ.ಆರ್. ಲೋಬೊ

Pinterest LinkedIn Tumblr

ಕದ್ರಿ ಕೈ ಬಟ್ಟಲ್ ಪರಿಸರದಲ್ಲಿರುವ ಡಾಕ್ಟರ್ ಕಾಲನಿಯಲ್ಲಿ ಲೋಬೊರವರಿಂದ ಮತಯಾಚನೆ.

ಮಂಗಳೂರು : ಕದ್ರಿ ಕೈ ಬಟ್ಟಲ್ ಪರಿಸರದಲ್ಲಿರುವ ಡಾಕ್ಟರ್ ಕಾಲನಿ ಮತ್ತು ಇನ್ನಿತರ ಸ್ಥಳಗಳಲ್ಲಿರುವ ಅನೇಕ ಮನೆಗಳಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೊರವರು ಬಿರುಸಿನ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಆರ್ ಲೋಬೊರವರು ಬಹಳಷ್ಟು ಕೆಲಸ ಕಾರ್ಯಗಳು ಈ ಪ್ರದೇಶದಲ್ಲಿ ಕರ್ನಾಟಕ ಸರಕಾರ ಮತ್ತು ಮಹಾನಗರಪಾಲಿಕೆಯ ವತಿಯಿಂದ ನಡೆದಿದೆ. ಜನರು ಬಹಳ ಸಂತುಷ್ಟರಲ್ಲಿದ್ದಾರೆ. ಅವರಿಗೆ ನಗರದ ಅಭಿವೃದ್ಧಿ ಮುಖ್ಯ. ಅವರು ಬಹಳ ನಂಬಿಕೆಯಿಂದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಡಿ.ಕೆ.ಅಶೋಕ್ ಕುಮಾರ್, ಗೋಪಾಲ ಶೆಟ್ಟಿ, ಮರಿಯಮ್ಮ ತೋಮಸ್, ಟಿ.ಕೆ ಸುಧೀರ್, ಮೋಹನ್ ಕೊಪ್ಪಳ, ಫ್ರಾನ್ಸಿಸ್, ರಮಾನಂದ ಪೂಜಾರಿ, ಲಿಯಾಕತ್ ಆಲಿ, ತನ್ವೀರ್, ಕೃತಿನ್ ಕುಮಾರ್, ಶಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Comments are closed.