Uncategorized

22 ವರ್ಷಗಳ ಬಳಿಕ ಮದುವೆ ದಿಬ್ಬಣ ಹೊರಟಿತು ನೋಡಿ!

Pinterest LinkedIn Tumblr

1
ಧೋಲಪುರ: ಸ್ವಾತಂತ್ರ್ಯ ಬಂದ ಹಲವು ದಶಕಗಳವರೆಗೆ ರಾಜಸ್ಥಾನದ ಅನೇಕ ಗ್ರಾಮಗಳಲ್ಲಿ ದಿಬ್ಬಣ ಹೊರಡುವ ಮಂಗಳವಾದ್ಯದ ಸದ್ದೇ ಕೇಳುತ್ತಿರಲಿಲ್ಲ. ಇದಕ್ಕೆ ಕಾರಣ ಆ ಊರಲ್ಲಿ ಹೆಣ್ಣುಮಕ್ಕಳಿಲ್ಲದಿರುವುದು. ಹೆಣ್ಣು ಭ್ರೂಣ ಹತ್ಯೆಯಿಂದ ಕುಖ್ಯಾತವಾಗಿದ್ದ ರಾಜಸ್ಥಾನದಲ್ಲಿ ಹೆಣ್ಣು ಕೂಸುಗಳು ಈ ಲೋಕಕ್ಕಿಳಿದು ಕಣ್ಬಿಡುವ ಮೊದಲೇ ಕೊನೆಯುಸಿರೆಳೆದಾಗಿರುತ್ತಿತ್ತು. ಉದರಲ್ಲಿದ್ದಾಗಲೇ ಅವುಗಳನ್ನು ಮುಗಿಸಿ ಬಿಡಲಾಗುತ್ತಿತ್ತು. ಸ್ವಾತಂತ್ರ್ಯದ ಬಳಿಕ ಈ ಪರಿಸ್ಥಿತಿ ಬದಲಾಯಿತು. ಜಾಗೃತಿಯ ಪರಿಣಾಮ ಗ್ರಾಮಗಳ ಅಂಗಳಗಳಲ್ಲಿ ಹೆಣ್ಣು ಮಗುವಿನ ಕಿಲಕಿಲ ನಗುವು ಕೇಳಿಸತೊಡಗಿತು. ಆದರೆ ರಾಜಸ್ಥಾನದ ಧೋಲಪುರ ಜಿಲ್ಲೆಯಿಂದ ಹರಿದು ಬರುತ್ತಿರುವ ಈ ಸುದ್ದಿ ಹೆಣ್ಣುಮಕ್ಕಳ ಕುರಿತಾಗಿರುವುದಿಲ್ಲ. ಬದಲಾಗಿ ಗಂಡು ಮಕ್ಕಳಿಗೆ ಸಂಬಂಧಿಸಿದ್ದು.

ಧೋಲಪುರದಲ್ಲಿ ಹೀಗೊಂದು ಹಳ್ಳಿ ಇದೆ. ಅಲ್ಲಿ ಕಳೆದ 22 ವರ್ಷಗಳ ದೀರ್ಘಕಾಲದ ನಿರೀಕ್ಷೆಯ ಬಳಿಕ ವರನ ಕಡೆಯವರ ದಿಬ್ಬಣ ಹೊರಟಿತು. ಅಂದು ಸಂಪೂರ್ಣ ಗ್ರಾಮವೇ ಸಂಭ್ರಮದ ಚಪ್ಪರ ಹಾಕಿಕೊಂಡು ಕಂಗೊಳಿಸಿತು.

ಧೋಲಪುರ ಜಿಲ್ಲೆಯ ರಾಜಘಾಟ ಗ್ರಾಮ ಜನರು ಕಳೆದ ಕೆಲ ತಿಂಗಳಿಂದ 29 ಏಪ್ರೀಲ್ ಯಾವಾಗ ಬರುತ್ತದೆ ಎಂದು ಕಾಯುತ್ತಲೇ ಇದ್ದರು. ಕಾರಣ ಎರಡು ದಶಕಗಳ ಬಳಿಕ ಆ ಊರ ವರನೋರ್ವ ವಧುವನ್ನು ಕರೆ ತರಲು ಹೊರಡುವವನಿದ್ದ . ಅಷ್ಟಕ್ಕೂ ಮೈಯ್ಯಿಗೆ ಅರಿಶಿಣ ಹಚ್ಚಿಕೊಳ್ಳಲು ಆ ಗ್ರಾಮದ ಯುವಕರು ಅಷ್ಟು ದೀರ್ಘಕಾಲ ಕಾಯುವಂತಾಗಿದ್ದಾದರೂ ಏಕೆ? ಅಂಥ ತಪ್ಪೇನು ಮಾಡಿದ್ದರವರು?

ಅದು ಆ ಊರ ಯುವಕರ ತಪ್ಪಾಗಿರಲಿಲ್ಲ. ಅಭಿವೃದ್ಧಿ ಎಂಬುದರ ಲವಲೇಶವನ್ನು ಕಾಣದ ಆ ಊರಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಯಾರು ಕೂಡ ಒಪ್ಪುತ್ತಿರಲಿಲ್ಲ. ಜನರು ನೀರಿಗಾಗಿ ಆಶ್ರಯಿಸಿದ್ದು ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕೈ ಪಂಪ್‌ನ್ನಾಗಿತ್ತು. ಅದರಲ್ಲಿ ಬರುತ್ತಿದ್ದುದು ಸಹ ಲವಣಯುಕ್ತ ನೀರು. ಸರ್ಕಾರಿ ಯೋಜನೆಗಳ್ಯಾವುವೂ ಈ ಗ್ರಾಮವನ್ನು ತಲುಪುತ್ತಲೇ ಇರಲಿಲ್ಲ. ವಿದ್ಯುತ್, ರಸ್ತೆ, ನೀರಿನಂತಹ ಮೂಲಭೂತ ಸೌಕರ್ಯಗಳನ್ನೇ ಕಾಣದ ಆ ಊರಲ್ಲಿ ಸೊಸೆಯಾಗಿ ಬರಲು ಯಾರು ಕೂಡ ಸಿದ್ಧರಿರುತ್ತಿರಲಿಲ್ಲ.

ಮತ್ತೀಗ 22 ವರ್ಷಗಳ ಬಳಿಕ ಪವನ ಎಂಬ ಯುವಕನ ದಿಬ್ಬಣ ಹೊರಟಿತು. 1996ರಲ್ಲಿ ಅಲ್ಲೊಬ್ಬ ಯುವಕನ ಮದುವೆಯಾಗಿತ್ತು. ಬಳಿಕ ನಡೆದಿದ್ದು ಕಳೆದ ಏಪ್ರೀಲ್ 29ರಂದೇ. 40 ಮನೆಗಳಿರುವ ಆ ಊರಲ್ಲಿ ಎರಡು ದಶಕಗಳ ಬಳಿಕ ಮಂಗಳವಾದ್ಯವೇನೋ ಮೊಳಗಿದೆ. ದೇಶಾದ್ಯಂತ ಸುದ್ದಿಯಾಗಿರುವ ಈ ಮದುವೆ ವ್ಯವಸ್ಥೆಯ ಮೇಲೆ ಸಾವಿರ ಸವಾಲುಗಳನ್ನು ಹುಟ್ಟಿಸಿದೆ.

Comments are closed.