ಕರಾವಳಿ

ದೀಪಾರಾಧನೆಯ ಸಮಯದಲ್ಲಿ ಮಾಡಬೇಕಾದ ಮಾಡಬಾರದಂತಹ ಕೆಲಸ

Pinterest LinkedIn Tumblr

ಸಂಜೆ ದೀಪಾರಾಧನೆಯ ಸಮಯದಲ್ಲಿ ಮಾಡಬೇಕಾದ ಮಾಡಬಾರದಂತಹ ಕೆಲಸಗಳ ಬಗ್ಗೆ ಹಿರಿಯರು ಹೇಳುತ್ತಿರುತ್ತಾರೆ. ಧರ್ಮಶಾಸ್ತ್ರಗಳು ಹೇಳುವಂತೆ ಉಗುರು ಕತ್ತರಿಸುವುದು, ಅಳುವುದು, ತಲೆ ಬಾಚಿಕೊಳ್ಳುವುದು, ಮನೆ ಸ್ವಚ್ಚ ಮಾಡುವುದು…ಇಂತಹ ಕೆಲಸಗಳನ್ನು ಮಾಡಬಾರದು.

ಇವುಗಳಿಗೆಲ್ಲಾ ಮುಖ್ಯವಾದ ಕಾರಣ ಇದೆ ಎಂಬುದು ಹಲವು ಜನರಿಗೆ ಗೊತ್ತಿರುವುದಿಲ್ಲ. …ದೀಪಾರಾಧನೆಯ ಸಮಯದಲ್ಲಿ ಜ್ಯೇಷ್ಟಾ ದೇವಿಯು ಹಿಂಬಾಗಿಲಿನಲ್ಲಿಯೂ, ಲಕ್ಷ್ಮೀದೇವಿಯು ಮುಂಬಾಗಿಲಲ್ಲೂ ಮನೆಯೊಳಗೆ ಪ್ರವೇಶಿಸುವರು. ಆದ್ದರಿಂದ ಜ್ಯೇಷ್ಟಾ ದೇವಿಯು ಹಿಂಬಾಗಿಲಿನಲ್ಲಿ ಪ್ರವೇಶ ಮಾಡದಿರಲು ಹಿಂಬಾಗಿಲನ್ನು ಮುಚ್ಚಿರಬೇಕು.

ಲಕ್ಷ್ಮೀದೇವಿಯು ಮನೆಯ ಒಳಗೆ ಪ್ರವೇಶಿಸಲು ಮುಂಬಾಗಿಲು ತೆರೆದಿರಬೇಕು.ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆಂದರೆ ನಾವು ಮನೆಯನ್ನು ಸ್ವಚ್ಚವಾಗಿಟ್ಟುಕೊಂಡು ನಾವು ಕೂಡಾ ಚೆನ್ನಾಗಿ ತಯಾರಾಗಿ ಅವರ ಬರುವಿಕೆಗಾಗಿ ಎದುರು ನೊಡುತ್ತೇವೆ. ಹಾಗೆಯೇ ನಮ್ಮ ಜೀವನದಲ್ಲಿ ಬೆಳಕು ತುಂಬಲು ಲಕ್ಷ್ಮಿ ಬರುವ ಸಮಯದಲ್ಲಿ ಮನೆಯನ್ನು ಸ್ವಚ್ಚಗೊಳಿಸಿ ನಾವೂ ಸ್ವಚ್ಚವಾಗಿದ್ದು ಆ ತಾಯಿಯನ್ನು ಆಹ್ವಾನಿಸಿದಲ್ಲಿ ಲಕ್ಷ್ಮೀದೇವಿಯು ಸದಾ ನಮ್ಮ ಮನೆಯಲ್ಲೇ ನೆಲಸಿರುತ್ತಾಳೆ.

Comments are closed.